Saturday 30 March 2013

ಅವಧಿ ಲೇಖನ : ಕನ್ನಡ ಕಾವ್ಯದಲ್ಲಿ ಮನುಷ್ಯನ ಹುಡುಕಾಟ.


ಆಧುನಿಕ ಕನ್ನಡ ಕಾವ್ಯದಲ್ಲಿ ಮನುಷ್ಯನ ಹುಡುಕಾಟ
ಡಾ. ಪ್ರಕಾಶ ಗ. ಖಾಡೆ
ಕನ್ನಡ ಕಾವ್ಯ ಹರಿವಿನಲ್ಲಿ ನೆಲೆನಿಂತ ಮಾನವತ್ವದ ಪರಿಕಲ್ಪನೆಯ ಓದು ಮತ್ತು ರಸಾನುಭವ ತುಂಬಾ ಆಪ್ತವಾದ ನೆಲೆಯಲ್ಲಿ ಹರವಿಕೊಳ್ಳುತ್ತದೆ. ಮಾನವೀಯತೆಯ ಮೂಲ ಸಂಸ್ಕರಣದಲ್ಲಿ ಉದಿಸಿದ ಯಾವುದೇ ಕಾವ್ಯ ಜನಮುಖಿ ಆಶಯಗಳನ್ನು ಪ್ರಕಟಿಸುತ್ತ ತನ್ನ ಇರುವಿಕೆಯ ಜೀವಸಾರವನ್ನು ಸದಾ ಉಳಿಸಿಕೊಳ್ಳುತ್ತದೆ. ಕನ್ನಡ ನವೋದಯ ಕಾವ್ಯ ಸಂದರ್ಭದ ತಾಕಲಾಟಗಳ ಪರಿ ಹಲವು ಬಗೆಯ ರಚನೆಗಳಿಗೆ ಕಾರಣವಾಗಿದೆ. ಕನ್ನಡ ನವೋದಯ ಕಾವ್ಯ ರೂಪುಗೊಳ್ಳುವ ಹೊತ್ತಿಗಿದ್ದ ರಾಷ್ಟ್ರೀಯತೆಯ ಒಟ್ಟು ಹೋರಾಟದ ತುಮುಲಗಳು ಮತ್ತು ಅನ್ಯರ ಆಕ್ರಮಿತ ಮನೋಭೂಮಿಕೆಯನ್ನು ಒಡೆದು ಹೊಸ ಬದುಕು ಕಟ್ಟುವ ತೀವ್ರತರವಾದ ಹಂಬಲಗಳು ಕಾವ್ಯದ ವಸ್ತು ಹೋರಾಟ ಪ್ರಜ್ಞೆಗೆ ಒಳಗುಮಾಡಿಕೊಂಡಿದ್ದರೂ ಅದರೊಳಗಿನ ನಿಸರ್ಗ ಪ್ರೀತಿ ಮಾನವತೆಯ ಪರ್ಯಾಯ ಸೃಷ್ಟಿಯಾಗಿದೆ.
ವಸಾಹತುಶಾಹಿ ಪ್ರಭುತ್ವದ ಪರಕೀಯ ಹಾಗೂ ಹೇರಿಕೆಯ ಒತ್ತಡಗಳ ವಿರೋಧಿ ನೆಲೆಯನ್ನು ಗಟ್ಟಿಗೊಳಿಸುತ್ತ ಆಧುನಿಕ ಕನ್ನಡ ಕಾವ್ಯ ‘ಮನುಷ್ಯ’ನ ಹುಡುಕಾಟ ನಡೆಸಿದ್ದು ಅದರ ವ್ಯಾಪಕತೆಯ ಹರವನ್ನು ಸೂಚಿಸುತ್ತದೆ. ಬಹು ಸಂಸ್ಕೃತಿಯ ಭಾರತೀಯ ಸಮುದಾಯದಲ್ಲಿ ಮನುಷ್ಯನ ಹುಡುಕಾಟ ನಡೆಸಿದ ಕಾವ್ಯ ಮಾನವೀಯತೆಯ ಅಗತ್ಯಗಳನ್ನು ಮನನ ಮಾಡಿಸುತ್ತ ಸಾಗಿದ್ದು ಕಾವ್ಯ ಶಿಲ್ಪದ ಹೆಚ್ಚುಗಾರಿಕೆಯಾಗಿದೆ.
ಆಧುನಿಕ ಕನ್ನಡ ಕಾವ್ಯದಲ್ಲಿ ನವೋದಯ ಕಾಣಿಸಿಕೊಂಡಾಗ ಅದು ಒಳಗೊಳ್ಳುವ ವಸ್ತುವು ವಿಸ್ತಾರ ಹಾಗೂ ವ್ಯಾಪಕವಾಯಿತು. ಈ ವಿಸ್ತಾರ ಮತ್ತು ವ್ಯಾಪಕತೆಯು ಮಾನವೀಯ ನೆಲೆಗಟ್ಟಿನಲ್ಲಿ ರೂಪಿತವಾಯಿತು. ನಿಸರ್ಗಮುಖಿಯಾದ ನವೋದಯ ಕಾವ್ಯ ನಿಸರ್ಗದಲ್ಲಿ ದೇವರು ಮತ್ತು ಮಾನವತ್ವದ ಪರಿಕಲ್ಪನೆಯನ್ನು ಒಡಮೂಡಿಸಿತು. ನಿಸರ್ಗ ಮತ್ತು ಮಾನವತ್ವದ ಬೆಸುಗೆ ಅನನ್ಯವಾದುದು. ಈ ಅನನ್ಯತೆಯನ್ನು ಗಟ್ಟಿಗೊಳಿಸಿದ್ದು ನವೋದಯ ಕಾವ್ಯ. ಕವಿ ವಿಮರ್ಶಕ ಜಿ. ಎಸ್. ಶಿವರುದ್ರಪ್ಪನವರು ಗುರುತಿಸುವಂತೆ, ‘ನವೋದಯ ಕಾವ್ಯ ವಸ್ತುವನ್ನು ಪ್ರಾಚೀನ ಇತಿಹಾಸದಿಂದ ಪುರಾಣಾದಿಗಳಿಂದ ನಿಸರ್ಗಕ್ಕೆ ಸ್ಥಳಾಂತರಿಸಿತು. ಹಾಗೆಯೇ ಹಿಂದೆ ಇದ್ದ ಮತ ಧರ್ಮದ ಸ್ಥಾನವನ್ನು ಈ ಕಾಲದಲ್ಲಿ ಸೌಂದರ್ಯ ಧರ್ಮ ಆಕ್ರಮಿಸಿಕೊಂಡಿತು’ ಈ ಸೌಂದರ್ಯ ಧರ್ಮ ರೂಪಿಸಿದ ಮನುಷ್ಯಾಭಿಲಾಷೆಗಳು ಕಾವ್ಯದ ಅಭಿವ್ಯಕ್ತಿಯ ರೂಪ ಪಡೆದವು.
ಆದಿಮಾನವ ಆಧುನಿಕ ನಾಗಕರಿಕನಾದಂತೆ ಅವನ ಆಚಾರ ವಿಚಾರ ರೀತಿ ನೀತಿ ನಡವಳಿಕೆ ಸಂಸ್ಕೃತಿಗಳಲ್ಲಿ ಬದಲಾಗತ್ತಾ ಬಂದು ಮಾನವತ್ವದ ಪರಿಧಿಯನ್ನು ಮೀರುವಂತಾಯಿತು. ಈ ಅತ್ಯಾಧುನಿಕ ಮನುಷ್ಯನ ಹುಡುಕಾಟಕ್ಕೆ ಆಧುನಿಕ ಕನ್ನಡ ಕಾವ್ಯ ಸಜ್ಜುಗೊಂಡು ಅವನ ಅಂತರ್ಗತ ವಿಮುಖತೆಗಳನ್ನು ಬಯಲು ಮಾಡಿ ನಿಜ ಮಾನವನ ದರ್ಶನ ಮಾಡಿಸಿತು. ಕವಿ ಸಿದ್ಧಯ್ಯ ಪುರಾಣಿಕರು ಸಾರಿದ ‘ಮೊದಲು ಮಾನವನಾಗು’ ಕವಿತೆ ಮನುಷ್ಯನ ಆದಿ ಅಂತ್ಯದ ಸಾರ್ಥಕತೆಯನ್ನು ಸಾರುತ್ತದೆ.
ರಾಜಕಾರಣಿಯಾಗು ರಾಷ್ಟ್ರಭಕ್ತನೇ ಆಗು
ಕಲೆಗಾರ ವಿಜ್ಞಾನಿ ವ್ಯಾಪಾರಿಯಾಗು
ಏನಾದರೂ ಆಗು ನೀ ಬಯಸಿದಂತಾಗು
ಏನಾದರೂ ಸರಿಯೇ ಮೊದಲು ಮಾನವನಾಗು.
ಮನುಷ್ಯ ಜೀವನ ಹಲವು ಹತ್ತು ಮಜಲುಗಳಲ್ಲಿ ಗುರುತಿಸಿಕೊಳ್ಳುತ್ತ ಪೊರೆ ಕಳಚಿಕೊಳ್ಳುತ್ತ ಸಾಗುತ್ತದೆ. ಈ ಸಾಗುವ ದಾರಿಯ ಏರಿಳಿತಗಳಲ್ಲಿ ತಾನು ತನ್ನ ಗ್ಪಟ್ಟಿತನವನ್ನು ಸಾರಬೇಕಾದುದು ‘ಮೊದಲು ಮಾನವನಾಗಿ’ ಎಂಬ ಕವಿಯ ಮಂತ್ರ ಹೆಚ್ಚು ಸಾಧುವು ಮತ್ತು ಸಾರ್ಥಕವೂ ಆಗಿದೆ. ಅವರದೇ ಇನ್ನೊಂದು ಕವಿತೆಯಲ್ಲಿ ‘ಕಾವ್ಯಾನಂದ’ ಸಿದ್ಧಯ್ಯ ಪುರಾಣಿಕರು ಹೇಳುವುದು ಹೀಗೆ.
ಹಸಿರಿಲ್ಲದಲ್ಲಿ ಹಸಿರು ಹುಟ್ಟಿಸುವುದು ಮಾನವ ಗುಣ
ಹಸಿರಿದ್ದಲ್ಲಿ ಮೆದ್ದು ಮಲಗುವುದು ಪಶು ಗುಣವಯ್ಯ
ತುಂಬಾ ಸರಳವಾದ ತಾತ್ವಿಕತೆಯಲ್ಲಿ ಕವಿ ಪುರಾಣಿಕರು ಮಾನವ ದಾನವರ ವ್ಯತ್ಯಾಸ ಸ್ಪಷ್ಟಪಡಿಸುತ್ತ ಮಾನವತ್ವದ ಗುಣಗಳನ್ನು ಸಾರುತ್ತಾರೆ.
ಕವಿ ಕುವೆಂಪು ಅವರು ಮನುಷ್ಯನನ್ನು ಮನಸ್ಸುಳ್ಳ ಜೀವಿ ಎಂದು ಸಾರಿ ಮಾನವತೆಯಲ್ಲೂ ವಿಶ್ವಮಾನ್ಯಗೊಳಿಸುವಲ್ಲಿ ಕಾವ್ಯವನ್ನು ದುಡಿಸಿಕೊಳ್ಳುತ್ತಾರೆ. ‘ನಾವು ನಮ್ಮನ್ನು ಹೆಸರಿಸಿಕೊಳ್ಳುವಾಗ ಆನೆಯೆಂದು ಕರೆದುಕೊಂಡಿಲ್ಲ, ಕುದುರೆ ಎಂದು ಕರೆದುಕೊಂಡಿಲ್ಲ, ಮನುಷ್ಯ ಎಂದು ಕರೆದುಕೊಂಡಿದ್ದೇವೆ. ಬಹುಶಃ ಉಳಿದವುಗಳಿಗಿಂತ ಹೆಚ್ಚಾಗಿ ಮನಸ್ಸುಳ್ಳ ಜೀವಿ ಎಂದು ನಮ್ಮನ್ನು ನಾವೇ ಗುರುತಿಸಿಕೊಂಡಿದ್ದೇವೆ’ ಎಂಬ ಕುವೆಂಪು ಅವರ ಮಾತುಗಳು ಪ್ರಾಣಿಗಳಿಗಿಂತ ಭಿನ್ನವಾದ ಮನುಷ್ಯನನ್ನು ಗುರುತಿಸಲು ಅಲ್ಲಿ ನೆಲೆ ನಿಂತ ಮನಸ್ಸು’ ಆಗಿದೆ. ಈ ಮನಸ್ಸು ವಿಶಾಲವಾಗಬೇಕು. ವಿಶ್ವಮಾನ್ಯವಾಗಬೇಕೆಂದು ಕುವೆಂಪು ಅವರ ಆಶಯ.
ಭಾರತೀಯ ಮನಸ್ಸುಗಳು ಅನಾದಿಕಾಲದಿಂದಲೂ ವಿಶ್ವಮೈತ್ರಿಗಾಗಿ ದುಡಿಯುತ್ತ ಬಂದಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿಕೊಂಡು ಬಂದ ಹಾಗೆ ನಮ್ಮವರು ‘ಲೋಕಾಸಮಸ್ತಾಃ ಸುಖಿನೋ ಭವಂತು’ ಎಂಬ ಶಾಂತಿ ಮಂತ್ರವನ್ನು ಘೋಷಿಸಿ ತಮ್ಮ ಆದರ್ಶವನ್ನೂ ಸಾರಿದ್ದಾರೆ. ಈ ಮೈತ್ರಿಯ ವಾತಾವರಣವಿಲ್ಲದಿದ್ದರೆ ಇಂದು ನಮ್ಮ ಹಿಮಾಲಯವೂ ಕೂಡ ‘ಭಗ್’ ಎಂದು ಹೊತ್ತಿಕೊಳ್ಳುತ್ತಿತ್ತು. ಆದರೆ ಈ ಮೈತ್ರಿಯ ಭಾವನೆ ಜಗತ್ತನ್ನು ವ್ಯಾಪಿಸಿರುವುದರಿಂದ ಹಿಮಾಲಯ ಇನ್ನೂ ತಣ್ಣಗೆ ಉಳಿದುಕೊಂಡಿದೆ. ನಮ್ಮ ಜನ ವಿಶ್ವಪ್ರಜ್ಞೆಯನ್ನು ಪಡೆದವರಾಗಿದ್ದರೂ ಆ ವಿಶ್ವಮೈತ್ರಿ ಮತ್ತು ವಿಶ್ವಮಾನವತೆ ನಮ್ಮೆಲ್ಲರ ಹೃದಯದಲ್ಲೂ ಇರಬೇಕು- ಎಂಬ ಆಶಯ ಸಾರುವ ಕುವೆಂಪು ಅವರು ತಮ್ಮ ವಿಶ್ವಮಾನವ ಸಂದೇಶದಲ್ಲಿ ಮನುಜಮತದ ಮಂತ್ರವನ್ನೂ ವ್ಯಾಪಕಗೊಳಿಸಿದ್ದಾರೆ.
ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ
ಬಡತನವ ಬುಡಮುಟ್ಟಿ ಕೀಳಬನ್ನಿ
ಮೌಢ್ಯತೆಯ ಮಾರಿಯನ್ನು ಹಿಡಿಯ ಬನ್ನಿ
ಓ ಬನ್ನಿ ಸೋದರರೆ ಬೇಗಬನ್ನಿ

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜಮತಕೆ
ಓ ಬನ್ನಿ ಸೋದರರೆ ವಿಶ್ವಪಥಕೆ.
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣ ದೃಷ್ಟಿ- ಈ ಪದಗಳು ಮಂತ್ರಗಳಾಗಿ ಮನುಷ್ಯರನ್ನು ಜಾತಿ ಮತಗಳಿಂದಲೂ ಭೇದಭಾವಗಳಿಂದಲೂ ಪಾರುಮಾಡಿ ಮನುಜರಿಂದ ನಿಜವಾದ ಪ್ರಜಾಸತ್ತೆ ಮತ್ತು ಸಮಾಜವಾದ ಸ್ಥಾಪನೆಯಾಗಲಿ ಎಂಬ ಹಾರೈಕೆಯಲ್ಲಿ ಕುವೆಂಪು ಅವರು ತಮ್ಮ ಕಾವ್ಯಗಳಲ್ಲಿ ಮನುಷ್ಯತ್ವದ ಹುಡುಕಾಟ ನಡೆಸಿದ್ದಾರೆ. ಕನ್ನಡ ನವೋದಯ ಕಾಲದ ಹಸರಾಂತ ಕವಿ ಡಿ. ವಿ. ಗುಂಡಪ್ಪನವರು ‘ಎಲ್ಲರೊಳಗೆ ಒಂದಾಗುವುದೇ’ ಮನುಷ್ಯನ ನಿಜ ಸಾರ್ಥಕತೆ ಎಂದಿದ್ದಾರೆ.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ
ಮಾನವೀಯತೆಯ ಬೇರುಗಳು ಸಡಿಲಗೊಳ್ಳುತ್ತಿದ್ದ ಕಾಲದಲ್ಲಿ ಡಿ. ವಿ. ಜಿ. ಅವರು ಸಾರಿದ ಮಾನವಮುಖಿ ನೀತಿ ಸರಳವಾಗಿದ್ದರೂ ತುಂಬಾ ಮೌಲಿಕವಾಗಿದೆ. ಮನುಷ್ಯ ಕಷ್ಟಸುಖಗಳ ಸಮಭಾಜನದಲ್ಲಿ ಮನುಷ್ಯತ್ವವನ್ನು ಬಿಡಬಾರದೆಂಬ ಅವರ ಮೌಲಿಕ ಚಿಂತನೆ ಮಾನವ ಸಮಾನತೆಯ ಅಗತ್ಯವನ್ನು ಸಾರಿದೆ.
ಕಾವ್ಯಗಾರುಡಿಗ ದ.ರಾ.ಬೇಂದ್ರೆಯವರು ಕಟ್ಟಿಕೊಟ್ಟ ಕಗ್ಗದಲ್ಲಿ ಮನುಷ್ಯನ ಹುಡುಕಾಟ ತುಂಬಾ ಆಪ್ತವಾಗಿಯೇ ಬಂದಿದೆ. ಜನಪದರ ಗೀಗೀ ಪದವನ್ನು ಹೋಲುವ ಬೇಂದ್ರೆಯವರ- ದುಡ್ಡು ದುಡಿತ ಕವಿತೆಯಲ್ಲಿ ಮನುಷ್ಯನ ಬದಲಾಗುತ್ತಿರುವ ಮನಸ್ಥಿತಿಯ ಆತಂಕ ಕಾಣುತ್ತೇವೆ.
ಅಜ್ಜಾ ಆರುತಲಿ ಮುತ್ತ್ಯಾ ಮೂರುತೆಲಿ
ಕಚ್ಚ್ಯಾಡಿ ಗಳಿಸಿದ್ದು ಕಳಿದಾರೋ
ನನ್ನೀನ ಮಂದಿ ಇಂದನ ಇಲ್ಲಾ
ಇಂದಿನವರು ಮುಂದ ಹ್ಯಾಂಗ ಉಳಿದಾರೋ.

ಹೊಲಾ ಮಾಡುವವ್ಗ ನೆಲಾನ ಇಲ್ದಿದ್ದರ
ಬಲಾ ಹ್ಯಾಂಗಾರೆ ಅವಗ ಉಳಿದೀತು
ಹಲಾ ಹಲಾ ಅಂತ ಎತ್ತಿನ್ನ ಗುದ್ದಿದ್ದರೆ
ಬಿತ್ತದ ಹೊಲಾ ಹ್ಯಾಂಗ ಬೆಳದೀತು…
ನಿನ್ನೆಯ ಜನ ಇಂದು ಇಲ್ಲ, ಇಂದಿನವರು ಮುಂದೆ ಹ್ಯಾಗೆ ಉಳಿದಾರು ಎನ್ನುವ ಆತಂಕದೊಂದಿಗೆ ಕವಿ ಮನುಷ್ಯ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವ ತುರ್ತನ್ನು ಸಾರಿದ್ದಾರೆ. ಬೇಂದ್ರೆಯವರಲ್ಲಿ ಬದುಕು ಹುಡುಕಿಕೊಂಡು ಹೊರಟ ಮನುಷ್ಯನ ದಾರಿಯನ್ನು ಎಚ್ಚರಿಸುವ ಪರಿ ‘ಮನುಷ್ಯ’ನ ಭಾಷ್ಯ ಬರೆದಂತಿದೆ.
ಕಣ್ಣಾಗ ಕಣ್ಣಿದ್ದವರು ಬರೀತಾರ ಕ್ಷೀರಸಾಗರದಾ ನಕಾಶಾ
ಕಾಲಾಗ ಕಣ್ಣಿದ್ದವರು ಕಾಲ ಹಾದೀ ಮಾಡತಾರ ಆಕಾಶಾ
ನತ್ತೀ ಮ್ಯಾಲೆ ಕಣ್ಣಿದ್ದವರಿಗೆ ಗ್ವಾಡಿ ಆಗತದ ಪ್ರಕಾಶ
ಮನುಷ್ಯನ ಸಾಧನೆ ಸಾಧ್ಯತೆಗಳಿಗೆ ಕವಿ ಕೊಡುವ ಪ್ರತಿಮೆ ಪ್ರತೀಕಗಳು ಮಾನವೀಯತೆಯ ನೆಲೆಯನ್ನೇ ಧ್ವನಿಸುತ್ತವೆ.
ತಲೆ ಬಾಗುವವರು ಬಾಳತಾರ
ಹುಲ್ಲು ಬಿದ್ದಾಂಗ
ನೆಲಾ ಅಪ್ಪಿದವರು ತಾಳತಾರ
ಕರಕಿ ಇದ್ದಾಂಗ.
ಬೇಂದ್ರೆಯವರ ಈ ಸಾಲುಗಳು ಭೂಮಿಯೊಂದಿಗೆ ಒಂದಾದ ಮನುಷ್ಯನ ಅವಿನಾಭಾವ ಸಂಬಂಧವನ್ನು ಸೂಚಿಸುತ್ತದೆ. ಮನುಷ್ಯನೊಳಗಿನ ಅಹಂಗಾರಿಕೆಯು ತೊಲಗಿ ಮನುಷ್ಯತ್ವದ ಆಶಯಗಳನ್ನು ನೆಲೆಗೊಳಿಸಿಕೊಳ್ಳಬೇಕೆಂಬ ಬೇಂದ್ರೆಯವರ ಈ ಹಾರೈಕೆಯ ಸಾಲುಗಳು ಮಾನವೀಯತೆಯ ಪ್ರತೀಕಗಳಾಗಿವೆ. ಮನುಷ್ಯ ಮನುಷ್ಯನಿಗೆ ಪ್ರತಿಸ್ಪರ್ಧಿ ಎಂಬ ಭಾವ ಸೂಚಿಸಿ ವೈರತ್ವದ ಸಾಧನೆಯಿಂದ ಮನುಷ್ಯತ್ವ ಕಳೆದುಕೊಳ್ಳುವ ಪರಿಯನ್ನು ಬೇಂದ್ರೆ ಅವರು ಬಹಳ ಸ್ಪಷ್ಟವಾಗಿ ಸೂಚಿಸುತ್ತಾರೆ.
ನೀವೆ ನಿಮ್ಮ ವೈರಿ, ಮನೆಯೊಳಗಿರ್ರಿ,
ಇಲ್ಲಾ ಮಸಣಕ್ಕ ವೈರಿ.
ಅರ್ಥಗರ್ಭಿತವಾದ ಈ ಸಾಲುಗಳು ಮನುಷ್ಯನೊಳಗಿನ ದ್ವೇಷಾಸೂಯೆಗಳನ್ನು ಸುಟ್ಟುಬಿಡಬೇಕೆಂಬ ಸಂದೇಶವಿದೆ. ಈ ಕಾರಣವಾಗಿ ಬೇಂದ್ರೆಯವರು ಮತ್ತೆ ಮತ್ತೆ ಸಾರುತ್ತಾರೆ, ‘ಭೂಮಿ ಎಂಬುದು ಮಣ್ಣು, ಪ್ರಜೆ ಎಂಬುದು ಮಣ್ಣು, ಸುಡಗಾಡು ನಾಗರಿಕತೆ’.
ಕನ್ನಡ ನವೋದಯ ಕಾವ್ಯದ ಅನುಭಾವಿ ಕವಿ ಮಧುರಚೆನ್ನ ಅವರು ಮನುಷ್ಯನ ಅಸ್ತಿತ್ವವನ್ನು ಪ್ರೀತಿಯ ಸೆಳೆತದಲ್ಲಿ ಕಾಣುತ್ತಾರೆ. ಮಧುರಚೆನ್ನರು ಜಾನಪದವನ್ನೂ ಮೈಗೂಡಿಸಿಕೊಂಡ ಕವಿ. ಹೀಗಾಗಿ ಅವರ ಕಾವ್ಯದಲ್ಲಿ ಜಾನಪದೀಯ ಮನುಷ್ಯನನ್ನು ಹುಡುಕುತ್ತೇವೆ. ಮಧುರಚೆನ್ನರ ಅನುಭಾವ ಮಾರ್ಗ ಸೃಷ್ಟಿ ರೂಪಿತವಾದುದು ಜನಪದರ ನೆಲೆಯಲ್ಲಿ. ತತ್ತ್ವಪದಕಾರರು, ಲಾವಣಿಕಾರರು, ಗರತಿಯರ ಹಾಡುಗಳಲ್ಲಿರುವ ದೈವಪರಗೀತೆಗಳು ಈ ಅನುಭಾವವನ್ನೇರಿ ಸ್ಪುರಿಸಿವೆ. ಶರೀಫ್, ಕಡಕೋಳ ಮಡಿವಾಳೇಶ್ವರರಾಗಲಿ, ಹದಿದಾಸರು, ವಚನಕಾರರಾಗಲಿ ಈ ಅನುಭಾವವನ್ನೂ ತಮ್ಮದಾಗಿಸಿಕೊಂಡಿದ್ದು ಜನಪದದಿಂದಲೇ, ಹೀಗಾಗಿ ಮಧುರಚೆನ್ನರ ಕಾವ್ಯದ ಮನುಷ್ಯನ ಹುಡುಕಾಟ ಅದು ಜಾನಪದೀಯ ನೆಲೆಯ ಪೌಷ್ಠಿಕತೆಯನ್ನು ಸಮೃದ್ಧಗೊಳಿಸಿಕೊಂಡಿದೆ.
ಮನುಷ್ಯನಿಗೆ ‘ಸುಖವು ಬೀದಿಯ ನೆರಳ ದುಃಖವು ದೂಡುವ ಬಿಸಿಲ’ ಎಂದು ಸಾರುವ ಮಧುರ ಚೆನ್ನ ಅವರು
ನಮ್ಮಂಗೆ ಅತ್ತವರು ನಮ್ಮಂಗೆ ಕರೆದವರು
ನಮ್ಮಂಗೆ ಬಾಡಿ ಬೆಂದವರು – ತಂಗೆಮ್ಮ
ಕಡಿಗೊಮ್ಮೆ ಗಟ್ಟಿಗೊಂಡವರು.
ಮನುಷ್ಯ ಬದುಕಿನ ಸುಖ ಸಾಂತ್ವನವನ್ನು ಅರಸುವಲ್ಲಿ ಪಡಬಾರದ ಕಷ್ಟವನ್ನು ತಾಳಿ ಧೃತಿಗೆಡದೆ ಸಾರ್ಥಕ್ಯವನ್ನು ಕಂಡುಕೊಳ್ಳುವ ಪರಿಯನ್ನು ಮಧುರಚೆನ್ನ ಅವರು ಸಾರುತ್ತಾರೆ. ದೇವನಿಗಾಗಿ ಹಂಬಲಿಸುವ ಪರಿಯಲ್ಲಿ ವಿರಹದ ಯಾತನೆ ಇದೆ. ಮನುಷ್ಯರು ಕಾಡುವ ಪರಿ ಅವರ ಸ್ವಭಾವಗಳ ಚಿತ್ರಣ ಮಧುರಚೆನ್ನರ ‘ನನ್ನನಲ್ಲ’ ಕವಿತೆಯಲ್ಲಿದೆ.
ಗಲ್ಲ ಹಿಡಿಯುವ ಕೆಲರು ಗಲ್ಲ ಹಿಂಡುವ ಕೆಲರು
ಬೆಸನಿಸುವ ಕೆಲರು ಬೆದರಿಸುವ ಕೆಲರು
ಕಲ್ಲುಗಳ್ಳುವ ಕೆಲರು ಹಲ್ಲು ಕಿಸಿಯುವ ಕೆಲರು
ಬಲ್ಲವರು ಬಲ್ಲಂತೆ ಬಣಗುತಿಹರು.
ಜನರ ಮನಸ್ಸುಗಳು ಮತ್ತು ಕವಿಯ ಹುಡುಕಾಟದಲ್ಲಿ ಪ್ರಕಟವಾಗುವ ಮಧುರಚೆನ್ನರ ಕಾವ್ಯ ಧ್ವನಿಯನ್ನು ಇಲ್ಲಿ ಗಮನಿಸಿದಾಗ ಮನುಷ್ಯರ ಬಹುಮುಖಿ ಸ್ವಭಾವಗಳ ಚಿತ್ರಣ ಅನುಭವ ವೇದ್ಯವಾಗುತ್ತದೆ. ಜನಸಾಮಾನ್ಯರ ಭಾಷೆ ಮತ್ತು ಅವರ ಬದುಕಿನ ಎಲ್ಲ ಕಷ್ಟ ಸುಖಗಳಿಗೂ ನಾಲಗೆಯಾಗಲೂ ಹೊರಟ ನವೋದಯ ಕಾವ್ಯ ಭಾವ ಭಾಷೆಗಳಲ್ಲಿ ಆವೇಶವಿಲ್ಲದೆ, ಸಾಂಪ್ರದಾಯಿಕ ಮೌಲ್ಯಗಳ ಪ್ರಜ್ಞೆಯ ಅರಿವಿನಲ್ಲಿ ಮನುಷ್ಯನ ಹುಡುಕಾಟ ನಡೆಸಿದೆ. ‘ಸಿರಿವಂತರು ಯುದ್ಧ ಸಾರುತ್ತಾರೆ. ಬಡವರು ಹೋರಾಡಿ ಸಾಯುತ್ತಾರೆ’ ಎಂಬಲ್ಲಿ ಕೆಳಸ್ತರದ ಮಾನವನ ತುಳಿತಕ್ಕೆ ಪ್ರತಿಭಟನೆಯ ಧ್ವನಿಯಾಗುತ್ತಾರೆ. ‘ಪಶ್ಚಿಮದ ಹ್ಯೂಮನಿಸಂ’ ನವೋದಯ ಕಾವ್ಯಕ್ಕೆ ನೀಡಿದ ಮಾನವೀಯ ಸ್ಪರ್ಶ ಮನುಷ್ಯರೊಳಗಿನ ಗುಣಾವಗುಣಗಳನ್ನು ತೋರಗೊಡಲು ಸಾಧ್ಯವಾಯಿತು. ಅನ್ಯಧರ್ಮಿಯ ನೆಲೆಯಿಂದ ತನ್ನ ಅಸ್ತಿತ್ವಕ್ಕೆ ಪರಕೀಯ ಭಾವದಿಂದ ಸ್ಪಂದಿಸುವ ಮನುಷ್ಯನ ಒಳತೋಟಿಯನ್ನು ಕವಿ ಕೆ. ಎಸ್. ನಿಸಾರ್ ಅಹಮದ್ ತುಂಬಾ ವಿಷಣ್ಣವಾಗಿ ನಮ್ಮೆದಿರು ತೆರೆದಿಡುತ್ತಾರೆ.
ನಿಮ್ಮೊಡನಿದ್ದೂ ನಿಮ್ಮಂತಾಗದೆ
ಒಳಗೊಳಗೆ ಬೇರು ಕೊಯ್ದು
ಲೋಕದೆದುರಲ್ಲಿ ನೀರು ಹೊಯ್ದು
ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
ಗೊತ್ತಿಲ್ಲದಂತೆ ನಟಿಸಿ
ಚಕಾರವೆತ್ತದೆ ನಿಮ್ಮೊಡನೆ ಕಾಫಿ ಹೀರಿ
ಪೇಪರೋದಿ ಹರಟಿ ಬಾಳ ತಳ್ಳುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ
ಮಾನವ ಕುಲ ಒಂದೇ ಎಂದು ಸಾರಿದ ಪಂಪನ ಆಶಯಗಳಿಗೆ ವಿಮುಖವಾದ ಜನಮಾನಸದ ನೀತಿಗೆ ಕವಿಯ ವಿಷಾದವಿದೆ. ಒಳಗೊಂದು ಹೊರಗೊಂದು ತೋರುವ ಮನಸ್ಥಿತಿಯ ಮನುಜರ ನಡುವೆ ಬಾಳು ತಳ್ಳುವ ಕಷ್ಟದ ಕಾಯಕವನ್ನು ಕವಿ ಕನವರಿಸುವಲ್ಲಿ ‘ಮನುಷ್ಯ’ರೊಳಗಿನ ಸಂಕುಚಿತತೆ ಅರಿವಾಗುತ್ತದೆ.
ನಾನು ಹುಟ್ಟಿದ್ದು ಸಾಯಲಿಕ್ಕೆ ಅಲ್ಲ
ಸೂರ್ಯ ಚಂದ್ರರ ಕೂಡ ಬದುಕಲಿಕ್ಕೆ
ಎಂಬ ಸಾಲುಗಳ ಮೂಲಕ ತಮ್ಮ ‘ಚಕ್ರವರ್ತಿಯಾಗುತ್ತೇನೆ’ ಕವಿತೆ ಆರಂಭಿಸುವ ಡಾ.ಎಂ.ಎಂ.ಕಲಬುರ್ಗಿ ಅವರು
ಹಿಮದಂತೆ ಹೆಪ್ಪುಗಟ್ಟದೆ
ಇಳಿಯುತ್ತೇನೆ, ದುರ್ಜನರ ಎದೆಯಲ್ಲಿ
ದೊಡ್ಡದಾಳಿಯಾಗಿ,
ಸುಳಿಯುತ್ತೇನೆ ಸಜ್ಜನರ ಪ್ರಾಣದಲಿ
ಪ್ರಾಣವಾಯುವಾಗಿ.
ಎಂಬಲ್ಲಿ ಕಲಬುರ್ಗಿಯವರು ಮನುಷ್ಯನ ಹೋರಾಟ ಪ್ರಜ್ಞೆಯನ್ನು ಜಾಗೃತಗೊಳಿಸುತ್ತ ಮನುಷ್ಯನ ಸಾರ್ಥಕತೆಯನ್ನು ಪ್ರಕಟಪಡಿಸಿದ್ದಾರೆ. ಕಮಲಾ ಹಂಪನಾ ಅವರು ಸ್ತ್ರೀ ಸಂವೇದನೆಯ ತಮ್ಮ ಕವಿತೆಯಲ್ಲಿ ಪುರುಷ ವಿರೋಧಿ ನೆಲೆಯಿಂದ ಬಿಡಿಸಿಕೊಂಡು ಸ್ವತಂತ್ರರಾಗಿ ಯೋಚಿಸುವ ಗಟ್ಟಿತನ ಕಾಣುತ್ತೇವೆ.
ನಾನು ಸೀತೆಯೂ ಅಲ್ಲ
ಅವನೊಡ್ಡಿದ ಅಗ್ನಿಕುಂಡ ಹಾಯಲು
ಕೆಳಗೆ ಬಿದ್ದ ಅವನ ಮೇಲೆತ್ತಲು
ನನ್ನಂತೆಯೆ ನೀನು ಎಂದು
ಅವನು ನನ್ನನ್ನೂ ಕಂಡಾಗ
ನಾನೊಬ್ಬ ಮಾನವಳು
ನಾನು ನಾನಾಗಿಯೇ ಉಳಿಯುವೆ ಕಮಲಾಪ್ರಿಯ
‘ನಾನೊಬ್ಬ ಮಾನವಳು’ ಎಂಬಲ್ಲಿ ಡಾ.ಕಮಲಾ ಹಂಪನಾ ಅವರು ವಿಶಾಲಾರ್ಥದಲ್ಲಿ ಸ್ತ್ರೀ ಸಮುದಾಯವನ್ನು ಕಂಡಿದ್ದಾರೆ. ಕವಿ ಕೆ. ಎಸ್. ನರಸಿಂಹಸ್ವಾಮಿ ಅವರ ಕವಿತೆಗಳು ಮನುಷ್ಯನ ಹುಡುಕಾಟದಲ್ಲಿ ಒಲುಮೆಯ ನೆಲೆಯನ್ನು ಕಂಡು ಕೊಂಡಿವೆ. ಕವಿ ತುಂಬಾ ಆಶಾವಾದಿಯೂ ಮನುಷ್ಯರೊಳಗೆ ಬಯಕೆಗಳಿಗೆ ರೆಕ್ಕೆಪುಕ್ಕ ನೀಡಿದ್ದಾರೆ. ಮನುಷ್ಯನನ್ನು ರೂಪಿಸಿದ ಶಕ್ತಿಗೆ ಕವಿ ಮೊರೆ ಹೋಗುತ್ತಾರೆ.
ದೀಪವೂ ನಿನ್ನದೆ ಗಾಳಿಯೂ ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ ಹಡಗೂ ನಿನ್ನದೆ
ಮುಳುಗದಿರಲಿ ಬದುಕು.
ಬದುಕು ಕಟ್ಟಿಕೊಡುವ ಅಗೋಚರ ಶಕ್ತಿಗೆ ಕವಿ ಆಶಾವಾದಿ ಕಾಣುವಲ್ಲಿ ಒಲುಮೆಯ ಸ್ಪರ್ಶವಿದೆ. ರಾಜಕಾರಣದಲ್ಲಿ ತೊಡಗಿಕೊಂಡೂ ಕವಿ ಮನಸ್ಸನ್ನೂ ಆರದ ನಾಲುಗೆಯಂತೆ ಕಾದುಕೊಂಡು ಬಂದ ಕವಿ ವೀರಪ್ಪ ಮೊಯ್ಲಿ ಅವರು ಮನುಷ್ಯನ ಹುಡುಕಾಟದಲ್ಲಿ ಸಮಾನತೆಯ ಮಂತ್ರವನ್ನು ಸಾರುತ್ತಾರೆ. ಮೊಯ್ಲಿ ಅವರ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಕೃತಿಯಲ್ಲಿ ‘ಪ್ರಜಾರೋಗ್ಯ ಕೆಡಿಸಿ ಗಳಿಸುವ ದ್ರವ್ಯವದೇಕೆ? ಒಬ್ಬರನೊಬ್ಬರು ತಿಂದು ಬದುಕುವದೆ ಮರಣ, ಒಬ್ಬರನೊಬ್ಬರು ಅರಿತು ಬಾಳುವುದೇ ಜೀವನ’ ಎಂದು ಸಾರುತ್ತಾರೆ. ದಶರಥನ ಮಾತುಗಳಲ್ಲಿ ಮಾನವ ಕುಲದ ಸಮಾನತೆ ಸಾರುತ್ತಾನೆ.
ಆರು ಕಟ್ಟಿದರು ಅಭೇದ್ಯ ಬಡತನದ ಕೋಟೆಯನು?
ತಡೆಯದೇ ಕೆಡಹಿಬಿಡಿ ಸುಟ್ಟು ಬಿಡಿ ಈ ಭೇದ
ಗುಮ್ಮಟವ.
ಋತ್ವಿಜರು ಅಂತ್ಯಜರು ರಾಜ ಪ್ರಜಾಕೋಟಿಗಳು
ಸರ್ವರೂ ಸಮರಿಲ್ಲಿ ಭೇದಭಾವವ ನೀಚ
ಪದ್ಧತಿಯ ಸಲ್ಲರೈ
ಮಾನವತೆಯ ಮೆರೆಯಬೇಕು, ಮೂಕ ಜನತೆಗೆ ಧನಿ ನೀಡಬೇಕೆಂಬ ಆಶಯದೊಂದಿಗೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಧ್ವನಿಯನ್ನು ಕವಿ ಮೊಯ್ಲಿ ಅವರು ನೀಚ ಪದ್ಧತಿ ತೊಲಗಲಿ ಎಂದು ಗುಡುಗಿದ್ದಾರೆ. ಮನುಷ್ಯ ಎಷ್ಟೇ ದೊಡ್ಡವನಾಗಿ ಕಂಡರು ತನ್ನ ವಿಶಾಲವಾದ ಮನೋಭೂಮಿಕೆಯಲ್ಲಿ ತನ್ನನ್ನು ತಾನು ಕಂಡಾಗ ತನ್ನ ನಿಲುವು ಅರಿವಾಗುತ್ತದೆ. ಕವಿ ಚೆನ್ನವೀರ ಕಣವಿ ಅವರು ತಾಯಿಯ ಮಡಿಲಲ್ಲಿ ಮನುಷ್ಯನ ಮಿತಿಯನ್ನು ಈ ಪುಟ್ಟ ಸಾಲುಗಳಲ್ಲಿ ಹೀಗೆ ಸಾರಿದ್ದಾರೆ.
ಗುಬ್ಬಿಯ ಪುಟ್ಟ ಆಕೃತಿ
ಮರೆಯಾಗಿ
ತಾಯಿಯ ವಿಶಾಲ ಹೃದಯದಲ್ಲಿ
ಕರಗಿ
ಹೋಗುತ್ತೇನೆ ನಾನು ಜೀವಂತವಾಗಿ
ಹೌದು. ಮನುಷ್ಯನ ಅಸ್ತಿತ್ವವೇ ಒಂದು ಅದ್ಭುತ. ಅದು ಬೃಹತ್ತಾಗುವ, ಮಹತ್ತಾಗುವ, ಕಿರಿದಾಗುವ, ಅಣುವಾಗುವ ಪರಿಯಲ್ಲಿ ಏನೆಲ್ಲಾ ಎಷ್ಟೆಲ್ಲ ತಿರುವುಗಳು. ಕೊನೆಗೆ ಅಳಿದಾಗ ಯಾರು ಕೇಳುತ್ತಾರೆ ಹೇಳಿರಣ್ಣ? ವಚನಕಾರರು ಸಾರಿದಂತೆ ‘ನೆಲನಾಳ್ದನ ಹೆಣವ ಒಂದಡಕೆಗೆ ಕೊಂಬವರಿಲ್ಲ’!

ಹಲಾ ಹಲಾ ಅಂತ ಎತ್ತಿನ್ನ ಗುದ್ದಿದ್ದರೆ ಬಿತ್ತದ ಹೊಲಾ ಹ್ಯಾಂಗ ಬೆಳದೀತು… « ಅವಧಿ / avadhi

ಹಲಾ ಹಲಾ ಅಂತ ಎತ್ತಿನ್ನ ಗುದ್ದಿದ್ದರೆ ಬಿತ್ತದ ಹೊಲಾ ಹ್ಯಾಂಗ ಬೆಳದೀತು… « ಅವಧಿ / avadhi

Friday 29 March 2013

ಬಾಗಲಕೋಟ ತಾಲೂಕು ಕಾವ್ಯ



                  ಬಾಗಲಕೋಟ ತಾಲೂಕು ಸಮಕಾಲೀನ ಕಾವ್ಯ

     ¨ÁUÀ®PÉÆÃmÉ vÁ®ÆPÀÄ PÁªÀå ¥ÀgÀA¥ÀgÉAiÀÄÄ vÀÄA¨Á ªÀiË°PÀªÁV MqÀªÀÄÆrzÉ.eÁ£À¥ÀzÀ,ªÀZÀ£À,¸ÀƦü ¥ÀgÀA¥ÀgɬÄAzÀ DzsÀĤPÀ PÁªÀåzÀ C¥ÀgÀÆ¥ÀzÀ ªÀiÁzÀjUÀ¼À£ÀÄß PÀ£ÀßqÀPÉÌ ¤ÃrzÀ PÉÆqÀÄUÉ F £É®zÀÄÝ.WÀl¥Àæ¨sÉAiÀÄ M¼À ¸É¼ÀªÀÅ,PÀȵÉÚAiÀÄ ¹ÃªÀiÁ ¥ÀæªÀ»¸ÀÄ«PÉAiÀÄ «²µÀÖ £À¢ ¸ÀA¸ÀÌøwAiÀÄ ¥ÀæwÃPÀªÁV E°è£À PÁªÀå ªÉÄÊzÉÆÃjzÉ.vÁ®ÆQ£À ¥Àæw ºÀ½î ºÀ½îUÀ¼À®Æè d£À¥ÀzÀ VÃvÉUÀ¼À£ÀÄß ºÁrPÉÆAqÀÄ §gÀĪÀ d£À¥ÀzÀjzÁÝgÉ,ªÀZÀ£À ¥ÀgÀA¥ÀgÉUÉ ¸ÁQëAiÀiÁV E°èAiÀÄ ºÀ®ªÀÅ £É¯ÉUÀ¼ÀÄ ¥ÀĤÃvÀªÁVªÉ. ²gÀÆj£À ±Á¸À£À PÀ« ºÀ§âtÚ £ÁAiÀÄPÀ QÃwðªÀAvÀ PÀ«.PÀ£ÀßqÀ zÁ¸À ¥ÀgÀA¥ÀgÉAiÀÄ ²æêÀÄAwPÉUÉ ¥Àæ¸À£Àß ªÉAPÀlzÁ¸ÀgÀÄ ¨ÁUÀ®PÉÆÃmÉAiÀÄ£ÀÄß vÀªÀÄä £É¯ÉAiÀiÁV¹PÉÆArzÀÝgÀÄ. C£ÀĨsÁ« ªÀgÀPÀ« ªÀÄzsÀÄgÀZÉ£ÀßjUÉ eÁÕ£À ¢ÃPÉëAiÀÄ£ÀÄß ¤ÃrzÀÄÝ ¨ÁUÀ®PÉÆÃmÉ.DzsÁåvÀäzÀ PÁªÀå ¸ÀgÀ¼ÀvÉAiÀÄ ¥ÀæwÃPÀªÁVzÀÝ fêÀtÚ ªÀĸÀ½,PÀ£ÀßqÀ £ÀªÀå PÁªÀåzÀ C¥ÀgÀÆ¥ÀzÀ PÀȶUÉÊzÀ D£ÀAzÀ gÀhÄÄAdgÀªÁqÀ,zÀ°vÀ §AqÁAiÀÄzÀ WÀnÖ zsÀé¤AiÀiÁzÀ qÁ.¸ÀvÁå£ÀAzÀ ¥ÁvÉÆæÃl, DzsÀĤPÀ PÁªÀåPÉÌ zÉùAiÀÄvÉ vÀÄA©zÀ qÁ.¥ÀæPÁ±À SÁqÉ, ¸ÀºÀÈzÀAiÀÄ ¸ÀºÀ¨Á¼ÉéAiÀÄ PÀ« qÁ.ªÉÄÊ£ÀÄ¢ÝãÀ gÉêÀrUÁgÀ,¦æÃw §zÀÄQ£À PÁªÀå PÀnÖzÀ C¨Áâ¸À ªÉÄð£ÀªÀĤ, ªÀiÁ£À«ÃAiÀÄ ¸ÀA§AzsÀUÀ¼À£ÀÄß ºÉuÉzÀ §¸ÀªÀgÁd ºÀÆUÁgÀ,wæ¥À¢UÀ¼À PÁªÀå ¸ÉÆUÀ¸ÀÄ ZÉ°èzÀ UÀÄgÀĸÁé«Ä UÀuÁZÁj,ZÀÄlÄPÀÄ PÁªÀåPÉÌ ZÀÄgÀÄPÀÄ vÀAzÀ ±ÁåªÀÄ ºÀÄzÁÝgÀ ªÀÄvÀÄÛ ¥Àæ¯ÁízÀ ºÀÄzÁÝgÀ ¨ÁUÀ®PÉÆÃmÉ vÁ®ÆQUÉ ¸ÉÃjzÀªÀgÉA§ÄzÀÄ ºÉªÉÄäAiÀÄ ¸ÀAUÀw.
WÀmÉÖAiÀÄ zÀAqÉAiÀÄ PÀ©â£À gÀ¸ÀªÀÅ
¨É®èzÀ CZÀÄÑ §®Ä ªÉÄZÀÄÑ ªÀiÁ°AUÉñÀUÉ
ºÁ¹zÀ ¥ÀnÖ gÀhiÁrAiÀÄAzÀªÀ £ÉÆÃrgÀAiÀÄå
¸ÉÆÃ£É ªÀÄ¼É £ÀqÀÄUÀĪÀ ZÀ½UÉ
¨ÉZÀÑ£Àß PÀÄAzÀgÀV PÀA§½ ºÉÆ¢¬ÄgÀAiÀÄå
vÀļÀ¹VjAiÀÄUÀ £À«Ä¹ PÀ¯ÁzÀV aPÀÄÌ ¸À«¬ÄgÀAiÀÄå.
 PÀ« ºÀ£ÀªÀÄAvÀ vÁ¸ÀUÁAªÀPÀgÀ CªÀgÀ F ¸Á®ÄUÀ¼ÀÄ ¨ÁUÀ®PÉÆÃl f¯ÉèAiÀÄ ªÉʲµÀÖöåªÀ£ÀÄß awæ¸ÀÄvÀÛªÉ.zÀ°vÀ §AqÁAiÀÄ ªÀÄ£ÉÆèsÁªÀzÀ PÀ«vÉUÀ½AzÀ PÀ£ÀßqÀ PÁªÀåPÉÌ ¦æÃw ¸ÀàµÀð ¤ÃrzÀ qÁ.¸ÀvÁå£ÀAzÀ ¥ÁvÉÆæÃl CªÀgÀ eÁf ªÀÄ°èUÉ PÀªÀ£À CvÀåAvÀ d£À¦æAiÀĪÁVzÉ.
¥ÀÄlÖ UÀÄr¸À°£À°è PÉlÖ PÀ£À¸ÀÄUÀ½®è
ªÀÄ£À¸ÀÄ PÀ£À¸ÀÄUÀ¼À°è eÁf ªÀÄ°èUÉ
¸ÀvÀÛ £ÀgÀUÀ¼À ¸ÀÄvÀÛ ºÀ¹zÀ ºÁªÀÅUÀ½®è
mÉÆAUÉ mÉÆAUÉAiÀÄ vÀÄA§ ©jªÀ ªÉÆUÀÄÎ.
»ÃUÉ CªÀgÀ PÁªÀå zsÀé¤ gÀƦvÀªÁVzÉ.£ÀªÀå £ÀªÉÇÃzÀAiÀÄ PÁªÀåzÀ ¨ÉgÉPÉAiÀÄ°è §gÉAiÀÄÄwÛgÀĪÀ D£ÀAzÀ gÀhÄÄAdgÀªÁqÀ PÀ£ÀßqÀzÀ ªÀÄÄRå PÀ«.
£À£Àß gÀ¹PÀ¤UÉ vÀ§â®Ä ªÀÄÄV®AUÀ¼ÀPÉ
¤®ÄPÀzÀ ¸ÀÆaÃ¥Àtð vÉÆüÀÄUÀ½ÃgÀ°
vÀ£Àß avÉAiÀÄ PÁ«£À®Æè £À¯ÉèAiÀÄ ªÉƯÉUÁªÀÅ
ºÀÄqÀÄPÀĪÀ £À®è£À G£ÀävÀÛ ªÁAbÉ EgÀ°
vÀ£ÉßÃ®è ±ÀÆ£Àå KPÁAvÀUÀ¼À£ÀÆß £ÀqÀÄ-¸ÀgÉÆêÀgÀzÀ°è
CqÀV UÉ®ÄèªÉ£ÉA§ ¥ÁæPÀÈwPÀ bÀ®«gÀ°.
 gÀhÄÄAdgÀªÁqÀgÀ F PÀ«vÉAiÀÄ ¸Á®ÄUÀ¼ÀÄ CªÀgÀ PÁªÀå ±ÀQÛAiÀÄ£ÀÄß ¥ÀæPÀl¥Àr¸ÀÄvÀÛªÉ.CªÀgÀ ‘PÀ«vÁ£À..ªÀÄgÀvÀ«æUÉ PÀ«Ã£Àß ªÀÄjðPÉ̵ÉÆÖvÀÄÛ.’JA§ PÁªÀå zsÀé¤AiÀÄ »A¢£À £ÉÆêÀÅ ¸ÀÈd£ÀvÉAiÀÄ ¤®ðPÀëvÉUÉ ¸ÁQëAiÀiÁVzÉ.

 £ÀªÉÇÃzÀAiÉÆÃvÀÛgÀ PÁªÀåzÀ ©gÀĹ£À°è §gÉAiÀįÁgÀA©ü¹zÀ qÁ.¥ÀæPÁ±À SÁqÉ ¸ÀAQÃtð PÁªÀåzÀ «²µÁÖ©üªÀåQÛ gÀZÀ£ÉUÀ¼À£ÀÄß ¤ÃrzÁÝgÉ.

£ÁªÀÇ eÉÆÃgÀÄ ªÀiÁqÀ§ºÀÄzÀÄ
¹PÀ̪ÀgÀ ªÉÄïÉ
K£ÀÄ G½AiÀÄÄvÀÛzÉ ºÉý
E°è ¦æÃw EgÀzÀ ªÉÄïÉ.
¦æÃwAiÀÄ CxÀðªÀ£ÀÄß «¸ÀÛj¹zÀ qÁ.SÁqÉ CªÀgÀ F ¸Á®ÄUÀ¼ÀÄ ªÀiÁ£À«ÃAiÀÄvÉAiÀÄ£ÀÄß ¸ÁgÀÄvÀÛªÉ.DzsÀĤPÀ ªÀZÀ£ÀUÀ¼À£ÀÄß gÀa¹ ºÉ¸ÀgÁzÀ UÀÄgÀĸÁé«Ä UÀuÁZÁj CªÀgÀÄ
¨sÁªÀ«®èzÀ PÁªÀå fêÀ«®èzÀ zÉúÀ
ºÁªÀ ¨sÁªÀjAiÀÄzÀ £ÀvÀðQ £Àl£É ¥Àj
PÁªÀå gÀ¸À»Ã£À UÀÄgÀÄ°AUÀ.
JAzÀÄ PÁªÀå PÀÄjvÀÄ ºÉüÀÄvÀÛgÉ.UÉÃAiÀÄvÉ,¥Áæ¸À§zÀÞvÉ,¯Á°vÀå,¸ÀÄAzÀgÀ ¥ÀzÀ¥ÀÄAdUÀ¼ÀÄ EªÀgÀ PÀ«vÉUÀ¼À «±ÉõÀ.PÀ« C¨Áâ¸À ªÉÄð£ÀªÀĤ CªÀgÀ PÀ«vÉUÀ¼ÀÄ fêÀzÀæªÀåzÀ ¸É¼ÀPÀÄUÀ¼ÁVªÉ.
VqÀzÀ mÉÆAUÉ mÉÆAUÉUÀÆ
PÁ½AUÀ ºÀjzÁqÀÄwÛzÀÝgÀÆ
ºÀQÌ UÀÆqÀÄ PÀlÖzÉ
©qÀĪÀÅ¢®è,¤°è¸ÀĪÀÅ¢®è
fêÀzÉÆ®«£À ºÁqÀÄ.
ªÀÄÆgÀÄ UÀ½UÉ zsÁªÀAvÀzÀ°è §zÀÄPÀÄ gÀƦ¹PÉƼÀÄîªÀ ªÀÄ£ÀĵÀå£À vÀÄrvÀPÉÌ ¤vÁAvÀ ¸ÀA¨sÀæªÀÄ«zÉ.£ÁªÉà ºÀÄlÄÖºÁQzÀ eÁw,¸Àéd£À ¥ÀPÀë¥ÁvÀ,UÀÄA¥ÀÄUÁjPÉ,¸ÁéxÀð,zÉéõÀ,PËgÀåUÀ¼À UÉ®è®Ä JzÉUÁjPÉAiÀÄ «±Áé¸À ¨ÉÃPÁVzÉ.ªÀÄļÀÄîUÀ¼À £ÀqÀÄªÉ CgÀ½PÉƼÀÄîªÀ UÀįÁ©AiÀÄ ¦æÃwAiÉÄà CzÀPÉÌ ¸ÁPÁVzÉ J£ÀÄßvÁÛgÉ PÀ« C¨Áâ¸À ªÉÄð£ÀªÀĤ.£ÀªÀå PÁªÀåzÀ §gÀªÀtÂUÉAiÀÄ£ÀÄß EA¢UÀÆ G½¹PÉÆAqÀÄ §AzÀ PÀ« CA¨ÁzÁ¸À ªÀqÉ PÁªÀåªÀ£ÀÄß d£ÀªÀÄÄTAiÀiÁV¹zÁÝgÉ.
PÁV ¤£Àß ªÀiÁå® ºÁqÀ PÀmÉÆÖzÀÄ
ºÁqÀ PÀnÖ ºÁqÀÆzÀAzÀæ
JAxÁ ºÁ¸Áå¸ÀàzÀ ºËzÀ¯ÉÆèÃ
¤£Àß PÀgÉ §tÚPÀÌ ,PÉlÖ ¸ÀégÀPÀÌ,
¤£Àß SÁAiÀÄA PÀvÀÛ®UÀªÁåVlÖ £À£Àß »gÁågÀÄ
¤£Àß ªÀiÁå°£À £À£Àß ºÁqÀPÀÌ SÉƼÀîAvÀ £ÀUÉÆÃzÉ£ÀÄ
D±ÀÑgÀå«®è ©qÀÄ..
    »ÃUÉ ªÀqÉAiÀĪÀgÀÄ PÁªÀåzÀ ªÀ¸ÀÄÛ DAiÉÄÌAiÀÄ°è ºÉƸÀvÀ£À ºÀÄqÀÄPÀÄvÁÛgÉ. PÀ«UÀ¼ÁzÀ qÁ.«dAiÀÄPÀĪÀiÁgÀ PÀlVºÀ½îªÀÄoÀ,qÁ.©.PÉ.»gÉêÀÄoÀ,¦.ªÉÊ.Vj¸ÁUÀgÀ,ªÀÄ°èPÁdÄð£À AiÀiÁ¼ÀªÁgÀ,zsÀȪÁZÁgï PÁRAqÀQ,¸ÀAUÀÄ PÉÆÃn,
                                 ( ಡಾ.ಮಲ್ಲಿಕಾ ಘಂಟಿ ) 
GªÉÄñÀ wªÀiÁä¥ÀÄgÀ,UÀAUÁzsÀgÀAiÀÄå eÁ°¨ÉAa,J¸ï.J¸ï.ºÀ¼ÀÆîgÀ,©ÃgÀ¥Àà ºÀ¼ÀªÀĤ,gÁdÄ AiÀiÁzÀªÀ, £ÁgÁAiÀÄt AiÀĽîUÀÄwÛ,ªÀĺÁ§¼ÉñÀégÀ UÀÄqÀUÀÄAn,«ÃgÉñÀ SÉÆÃvÀ,JZÉÌ DªÀn, 
                                ( ಡಾ.ವಿರೇಶ ಬಡಿಗೇರ )
qÁ.«ÃgÉñÀ §rUÉÃgÀ, ±ÀAPÀgÀ ®ªÀiÁtÂ,²æäªÁ¸À CzsÁå¥ÀPÀ ,zÉÆqÀØtÚ UÀzÀÝ£ÀPÉÃj,£ÁUÀgÁd ¥ÀÆeÁgÀ,PÀȵÀÚ PÉÆÃgÁ,¸ÀĨsÁ¸ÀÑAzÀæ eÁzsÀªÀ,¹zÀÝgÁd ¸ÉÆ£ÀßzÀ, ±ÀAPÀgÀ ºÀÆUÁgÀ,ªÉÆzÀ¯ÁzÀªÀgÀÄ vÁ®ÆQ£À d£À¦æAiÀÄ PÀ«UÀ¼ÀÄ,¨ÁUÀ®PÉÆÃl vÁ®ÆQ£À ªÀÄ»¼Á PÁªÀåªÀÅ ZɮĪÁV ZÉ®ÄèªÀj¢zÉ.±ÁAvÁ¨Á¬Ä ¸Á¨Á¢,
                                    ( ರೇಖಾ ಕಾಖಂಡಕಿ )
gÉÃSÁ PÁRAqÀQ,«ÃuÁ ±ÁAvÉñÀégÀ,qÁ,±ÀPÀÄAvÀ¯Á zÀÄVð,qÁ.ªÀÄ°èPÁ WÀAn,qÁ.¸ÀgÉÆÃf¤ ¥ÁªÀmÉ,qÁ.±À²PÀ¯Á ªÀÄj¨Á±ÉnÖ,¸ÀĪÀÄAUÀ¯Á ¨ÁzÁ«Ä,gÀÄzÀæªÀÄä PÉÆÃj,J£ï,gÁeÉñÀéj,ªÀĺÉñÀéj PÉÆÃn,¸ÀÄ£ÀAzÁ PÀ£ÀªÀÄr,eÁ¹äãï Q¯ÉèzÁgÀ,dAiÀIJæà zÉñÀ¥ÁAqÉ,¸ÀÄgÉÃSÁ zÀvÁÛvÉæÃAiÀÄ,
                             ( ಡಾ.ವಿಜಯಕುಮಾರ ಕಟಗಿಹಳ್ಳಿಮಠ)
ºÉêÀiÁ zÉøÁ¬Ä,ªÀÄAdļÁvÁ¬Ä CAUÀr,gÁeÉñÀéj PÀAp,UËj PÀAp, UÀÄgÀªÀÄä ¸ÀAQãÀ,¸ÀAVÃvÁ ¹PÉÌÃj,«ÄãÁQë ªÀÄÄAqÀUÀ£ÀÆgÀ,«ÃgÀªÀÄä ¥Ánî,ªÀĺÁzÉë ºÉƸÀªÀĤ ªÉÆzÀ¯ÁzÀªÀgÀÄ PÁªÀå PÉëÃvÀæªÀ£ÀÄß ²æêÀÄAvÀUÉƽ¹zÁÝgÉ.MmÁÖgÉ WÀl¥Àæ¨sÉAiÀÄ vÀlzÀ ¨ÁV®Ä PÉÆÃmÉUÉ ¸ÀªÀÄPÁ°Ã£À PÁªÀå vÉÆÃgÀt ºÀZÀÑ ºÀ¸ÀÄj¤AzÀ PÀÆrzÉ. #


 
       





Thursday 28 March 2013



 ವಿಶೇಷ ಲೇಖನ :
    ‘ಬಾಗಲಕೋಟೆ ಹೋಳಿ ಹಬ್ಬಕ್ಕೆ ಜಯವೆನ್ನಿ’
                   -ಡಾ.ಪ್ರಕಾಶ ಗ.ಖಾಡೆ
  ಬಾಗಲಕೋಟೆ ಊರು ಮುಳುಗಡೆ ಮತ್ತು ಸ್ಥಳಾಂತರದ ಕಾರಣವಾಗಿ ಇಡೀ ಏಶಿಯಾ ಖಂಡದಲ್ಲಿಯೇ ಬಹು ದೊಡ್ಡ ನಗರವೊಂದು ತಲ್ಲಣಕ್ಕೊಳಗಾಗಿ ಈಗ ಸುಂದರವಾಗಿ ರೂಪಿತವಾಗುತ್ತಿರುವುದು ಒಂದು ದಾಖಲೆಯೆ ಸರಿ. ಘಟಪ್ರಭಾ ನದಿಯ ದಡದಲ್ಲಿರುವ ಈ ನಗರವು ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನಿಂದ ಕೃಷ್ಣೆವು ಸೇರಿಕೊಂಡು ಕೋಟೆಯ ಬಾಗಿಲಿಗೆ ಬಾಗಿನ ಅರ್ಪಿಸಿದಂತಾಗಿದೆ.ಬಾಗಲಕೋಟೆಯು  ರಾಮಾಯಣ ಕಾಲದಿಂದಲೂ ಚಾಲ್ತಿಯಲ್ಲಿದ್ದ ಊರು.ಲಂಕಾಧಿಪತಿ ರಾವಣಾಸುರನು ಭಜಂತ್ರಿ ವಾದ್ಯಗಾರರಿಗೆ ದಾನವಾಗಿ ನೀಡಿದ ಊರು.ಅಂತೆಯೇ ಇಲ್ಲಿನ ಭಜಂತ್ರಿಯವರು ಶಹನಾಯಿ ವಾದನಕ್ಕೆ ಸವಣೂರು ನವಾಬನಿಂದ ಬೆಳ್ಳಿಯ ಶಹನಾಯಿಯನ್ನು ಬಹುಮಾನವಾಗಿ ಪಡೆದುಕೊಂಡಿದ್ದರು. 1664 ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ದಕ್ಷಿಣದ ಬೀಂಜಿ ಕೋಟೆಗೆ ಹೋಗುವಾಗ ಈ ನಗರಕ್ಕೆ ಭೇಟಿ ಕೊಟ್ಟಿದ್ದರೆಂದು ಇತಿಹಾಸ ಹೇಳುತ್ತದೆ.ವಿಜಾಪುರದ ಆದಿಲಶಾಹಿ ಅರಸರು ಈ ಊರನ್ನು ತಮ್ಮ ಮಗಳಿಗೆ ಬಳೆ ತೊಡಿಸುತ್ತಿದ್ದ ಬಳೆಗಾರನಿಗೆ ಉಂಬಳಿಯಾಗಿ ಕೊಟ್ಟಿದ್ದರಂತೆ,ಅದಕ್ಕಾಗಿ ಈ ಊರಿಗೆ ಬಾಂಗಡಿ ಕೋಟೆ ಎಂದೂ ಮುಂದೆ ಬಾಗಲಕೋಟೆಯೆಂದು ಹೆಸರಾಯಿತು ಎಂಬ ಪ್ರತೀತಿ ಇದೆ.ಬಾಗಲಕೋಟೆಯ ಇತಿಹಾಸ ಮತ್ತು ಸಂಸ್ಕøತಿ ಅಭ್ಯಸಿಸಿದಾಗ ಇಲ್ಲಿ ಸರ್ವಧರ್ಮಿಯರು ಕೂಡಿ ಬಾಳಿ ದೇಶಕ್ಕೆ ಭಾವೈಕ್ಯತೆಯ ಸಂದೇಶ ಸಾರಿದ ಕೀರ್ತಿ ಈ ನಗರಕ್ಕಿದೆ.ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ‘ಅಸಹಕಾರ ಚಳವಳಿ’ ಬಗ್ಗೆ ಜನಾಭಿಪ್ರಾಯ ಮೂಡಿಸುವ ಸಲುವಾಗಿ ಗಾಂಧೀಜಿಯವರು ಬಾಗಲಕೋಟೆಗೆ ಬಂದಿದ್ದರು.1921 ಮೇ 28 ರಂದು ಗಾಂಧೀಜಿಯವರು ಬಾಗಲಕೋಟೆಗೆ ಬಂದಾಗ ಆ ಕಾಲಕ್ಕೆ ಒಂದು ಸಾವಿರ ರೂ.ಗಳ ನಿಧಿಯನ್ನು ಅರ್ಪಿಸಲಾಗಿತ್ತು.1931 ರಲ್ಲಿ ಪಂಡಿತ ಜವಾಹರಲಾಲ ನೆಹರೂ ಬಾಗಲಕೋಟೆಯ ಹಿಂದೂಸ್ಥಾನ ಸೇವಾದಳಕ್ಕೆ ಭೇಟಿಕೊಟ್ಟಿದ್ದರು.ಐತಿಹಾಸಿಕ ಸೇವಾದಳ ಕಟ್ಟಡ ಮುಳುಗಡೆಯಾಗಿ ಅದರ ಪ್ರತಿರೂಪ ನವನಗರದಲ್ಲಿ ನಿರ್ಮಿಸಲಾಗಿದೆ.ಸರ್ದಾರ್ ವಲ್ಲಭ ಬಾಯಿ ಪಟೇಲರು ಭಾಷಣ ಮಾಡಿದ ಜಾಗದಲ್ಲಿ ವಲ್ಲಭ ಬಾಯಿ ಚೌಕ ಕಟ್ಟಲಾಗಿದೆ,ಇದೂ ಎರಡನೆಯ ಹಂತದಲ್ಲಿ ಕೃಷ್ಣಾರ್ಪಣವಾಗಲಿದೆ.ಇವತ್ತು ಹಳೆಬಾಗಲಕೋಟ-ವಿದ್ಯಾಗಿರಿ-ನವನಗರವನ್ನು ಒಂದುಗೂಡಿಸುವ ಬೃಹತ್ತ ಸೇತುವೆ ಮತ್ತು  ರಸ್ತೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಿಸಿ ಸುಂದರಗೊಳಿಸಲಾಗಿದೆ.ಮರಾಠ ದೊರೆಗಳ ಕಾಲದಲ್ಲಿ ಕಟ್ಟಲಾಗಿದ್ದ ಶಿರೂರು ಅಗಸಿಯು ಮುಳುಗಡೆಯಾಗಲಿದ್ದು ,ಅದನ್ನು ಸಂಗಮ ಕ್ರಾಸ್ ಬಳಿ ಬೃಹತ್ತಾಗಿ ಕಟ್ಟಲಾಗುತ್ತಿದೆ.ಮುಳುಗಡೆ ಊರಿನ ಹಿಂದಿನ ಸಂಸ್ಕøತಿಯನ್ನು ಮರು ಸ್ಥಾಪಿಸಲು ಊರ ಜಾತ್ರೆ,ಹಬ್ಬ ಹರಿದಿನ,ಉರುಸು ,ಓಕಳಿ ಮೊದಲಾದವನ್ನು ನಗರದ ಯುವ ಜನಾಂಗ ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ.ಇಂಥ ಆಚರಣೆಗಳಲ್ಲಿ ಬಾಗಲಕೋಟೆಯ ಹೋಳಿ ಹಬ್ಬವೂ ಒಂದು.
ಹಾದಿಗೆ ಜಯವೆನ್ನಿ ಬೀದಿಗೆ ಜಯವೆನ್ನಿ
ಬಾಗಲಕೋಟೆಯ ಹೋಳಿ ಹಬ್ಬಕ್ಕೆ ಜಯವೆನ್ನಿ
ಇಡೀ ದೇಶದಲ್ಲಿಯೇ ಬಾಗಲಕೋಟೆಯ ಹೋಳಿ ಆಚರಣೆಗೆ ಒಂದು ವಿಶಿಷ್ಟತೆ ಇದೆ.ಹತ್ತು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಕಲ್ಕತ್ತಾ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದರೆ,ಐದು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಬಾಗಲಕೋಟ ಎರಡನೆಯ ಸ್ಥಾನದಲ್ಲಿದೆ.ಬಾಗಲಕೋಟೆಯಲ್ಲಿಮೊದಲಿನಿಂದಲೂ ಮುಖ್ಯವಾಗಿ 5 ಪೇಟೆಗಳಿವೆ.ಕಿಲ್ಲಾ,ಹಳಪೇಟ,ಹೊಸಪೇಟ,ಜೈನಪೇಟ ಮತ್ತು ವೆಂಕಟಪೇಟ.ಮುಳುಗಡೆಯಿಂದ ಇವೆಲ್ಲ ಮೂಲ ಸ್ವರೂಪದಲ್ಲಿ ಉಳಿದಿಲ್ಲ.ಈ ಐದು ಓಣಿಗಳಿಗೆ ತುರಾಯಿ ಹಲಗೆ ಹಾಗೂ ಹಿಂದಿನ ಕಾಲದಿಂದ ಬಂದ ನಿಶಾನೆಗಳು ಇರುವವು.ಪ್ರತಿಯೊಂದು ಓಣಿಗಳಲ್ಲಿ ಹೋಳಿಹಬ್ಬದ ಬಾಬಿನ ಮನೆತನಗಳಿವೆ.ಮುಳುಗಡೆಯಿಂದ ಮಾಘ ಅಮವಾಸ್ಯೆಯ ಮರುದಿನದಿಂದಲೇ ಅಖಂಡ ಬಾಗಲಕೋಟೆಯ ಓಣಿ ಓಣಿಗಳಲ್ಲಿ ಹಲಗೆಯ ಸಪ್ಪಳ ಕೇಳಿ ಬರುತ್ತದೆ.ಬಾಗಲಕೋಟ ಹೋಳಿ ಹಬ್ಬದ ಅತಿ ಮುಖ್ಯ ಆಕರ್ಷಣೆ ಎಂದರೆ ‘ಸಂಪ್ರದಾಯ ತುರಾಯಿ ಹಲಗೆ ವಾದನ’ವಾಗಿದೆ.ತುರಾಯಿ ಹಲಗೆ ಎಂದರೆ ಸುಮಾರು ಹತ್ತು ಚಿಟ್ಟಲಿಗೆಗಳ ಒಂದು ಬೃಹತ್ ಆಕಾರದ ಹಲಗೆ.ಈ ಹಲಗೆಯ ಮೇಲೆ ಬಿರುದಾಗಿ ಚಿನ್ನದ ಇಲ್ಲವೇ ಬೆಳ್ಳಿಯ ಕಳಸ ಇರುತ್ತದೆ.ಇದಕ್ಕೆ ತುರಾಯಿ ಎನ್ನುತ್ತಾರೆ.ತುರಾಯಿ ಮೇಲುಗಡೆ ರಂಗು ರಂಗಿನ ಗುಚ್ಛವಿದ್ದು ರಾತ್ರಿ ಸಮಯದಲ್ಲಿ ವಿದ್ಯುದ್ದೀಪಗಳಿಂದ ಅಲಂಕರಿಸಿರುತ್ತಾರೆ.ಇದರ ಜೊತೆಗೆ ಅದರದೇ ಆದ ,ಹಿಂದಿನ ಕಾಲದಿಂದ ಬಂದ ರಂಗು ರಂಗಿನ ರೇಶ್ಮೆ ಬಟ್ಟೆಗಳ ಮೂವತ್ತು ಅಡಿ ಎತ್ತರದ ನಿಶಾನೆಗಳು ಇರುವವು.ಈ ನಿಶಾನೆಗಳು ಕೆಲವು ಹಿರಿಯರು ಪೇಶ್ವೆ ಮಹಾರಾಜರಿಂದಲೂ,ಇನ್ನೂ ಕೆಲ ಹಿರಿಯರು ವಿಜಾಪುರದ ಆದಿಲ್ ಶಾಹಿ ಸುಲ್ತಾನರಿಂದ ಬಂದವುಗಳಾಗಿವೆ.ಹೋಳಿ ಹಬ್ಬದ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ಹಲಗೆ ವಾದನ ಕೇಳುವುದೇ ಒಂದು ಸಂಭ್ರಮ.ಹಿರಿಕಿರಿಯರೆನ್ನದೇ ಎಲ್ಲ ವಯೋಮಾನದವರು  ಇಲ್ಲಿ ಹಲಗೆ ನುಡಿಸುತ್ತಾರೆ.ಹಲಗೆವಾದನ ಪ್ರಾರಂಭವಾಗುವದು ಶಹನಾಯಿ ನುಡಿಸುವದರೊಂದಿಗೆ ಮುಖ್ಯ ಕಲಾವಿದನೊಬ್ಬ ದೊಡ್ಡ ಹಲಗೆಯನ್ನು ಹಿಡಿದು ನೃತ್ಯಕ್ಕೆ ಚಾಲನೆ ನೀಡುತ್ತಾನೆ.ಡಪ್ಪಿಗೆ ಸರಿಯಾಗಿ ಚಿಕ್ಕ ಹಲಗೆಯವರು ಪೆಟ್ಟು ಹಾಕುತ್ತಾರೆ.ಜತೆಗೆ ಡಗ್ಗಾ,ಝಮರಿ ಚಳ್ಳಮ,ಕಣಿಯ ವಾದಕರು ಕ್ರಮಬದ್ದ ಹೆಜ್ಜೆ ಹಾಕುತ್ತ ‘ಇನ್ನೂ ಯಾಕ ಬರಲಿಲ್ಲಾವ.. ಹುಬ್ಬಳ್ಳಿಯಾವ..’,’ಚೆನ್ನಪ್ಪ ಚೆನಗೌಡಾ’ ಎಂಬ ಸನಾದಿ ಸೂರಿನೊಡನೆ ತನ್ಮಯವಾಗಿ ಹರ್ಷದಿಂದ ಕುಣಿದು ಕುಪ್ಪಳಿಸುವರು.
ಕಾಮ ದಹನ :
ಬಾಗಲಕೋಟೆಯ ಹೋಳಿ ಆಚರಣೆಯ ಕಾಮದಹನ ಪ್ರಕ್ರಿಯೆಯು ಸಕಲ ಸಮುದಾಯದವರ ಪಾಲ್ಗೊಳ್ಳುವಿಕೆಯೊಂದಿಗೆ ಪ್ರಾರಂಭವಾಗುತ್ತದೆ.ಹೋಳಿಯ ದಿನ ಕಾಮನನ್ನು ಸುಡುವುದಕ್ಕಾಗಿ ಹುಡುಗರು ಓಣಿಯ ಮನೆಮನೆಯಲ್ಲೂ ಕಣ್ಣು ತಪ್ಪಿಸಿ ಕುಳ್ಳು,ಕಟ್ಟಿಗೆ,ನಿಚ್ಚಣಿಕೆ ಕದ್ದು ತಂದು ಒಂದೆಡೆ ಕೂಡಿಹಾಕುವ ಸಂಪ್ರದಾಯವಿದೆ.ಬಹುತೇಕ ಈ ಸಂಪ್ರದಾಯ ಮರೆಯಾಗಿದೆ.ಕೇಳಿ ಮತ್ತು ಕೊಂಡು ತಂದ ಕಟ್ಟಿಗೆ,ಕುಳ್ಳು ಮತ್ತು ಬಿದಿರುಗಳನ್ನು ರಾಶಿಗಟ್ಟಲೇ ಹೇರಿ ಅದರ ನಡುವೆ ಕಾಮನ ಚಿತ್ರ ಬರೆದು ಚಿತ್ರವನ್ನು ಕೋಲಿಗೆ ಅಂಟಿಸಿ ಕಾಮನಿಗೆ ಪೂಜೆ ಸಲ್ಲಿಸಿ ದಹಿಸಲು ಸಿದ್ದರಾಗುತ್ತಾರೆ.ನಂತರ ಹಲಗೆ ಮೇಳದೊಂದಿಗೆ ನಿಶಾನೆ ಹಾಗೂ ಚಲುವಾದಿ ಬಟ್ಟಲುದೊಂದಿಗೆ ಓಣಿಯ ಶೆಟ್ಟರನ್ನು ಕರೆದುಕೊಂಡು ದಲಿತರ ಓಣಿಗೆ ಹೋಗಿಅಲ್ಲಿ ಖಾತೆದಾರರ ಮನೆಯಲ್ಲಿ ವೀಳ್ಯದೆಲೆ,ಅಡಿಕೆಯನ್ನು ಕೊಟ್ಟು ಅವರನ್ನು ಆಮಂತ್ರಿಸುವ ಸಂಪ್ರದಾವಿದೆ.ಆಚರಣೆಯ ಬಾಬುದಾರರಾದ ಖಾತೆದಾರರ ಮನೆಯಿಂದಲೇ ಬೆಂಕಿ ತಂದು ಕಾಮದಹನ ಮಾಡಲಾಗುತ್ತದೆ.ನಸುಕಿನ ಜಾವದಿಂದ ಆರಂಭವಾದ ಕಾಮದಹನವು ರಾತ್ರಿಯವರೆಗೂ ನಗರದ ವಿವಿಧ ಓಣಿ ಮತ್ತು ಬಡಾವಣೆಗಳಲ್ಲಿ ಪ್ರಮುಖ ಕಾಮಣ್ಣರ ದಹನ ನಡೆಯುತ್ತದೆ.ಮೊದಲು ಹೊತ್ತಿಸಿದ ಬೆಂಕಿಯನ್ನೇ ಎಲ್ಲರೂ ತಂದು ಕಾಮದಹನ ಮಾಡುವುದು ವಿಶೇಷ.ಕಾಮನನ್ನು ಸುಟ್ಟ ದಿವಸ ಅದೇ ಬೂದಿಯಿಂದಲೇ ದೊಡ್ಡವರು ಸಣ್ಣವರೆನ್ನದೇ ಬೂದಿ ಆಟವಾಡುತ್ತಾರೆ.
ಬಣ್ಣದ ಬಂಡಿಗಳು :
ಬಾಗಲಕೋಟೆ ಹೋಳಿಯ ಮುಖ್ಯ ಆಕರ್ಷಣೆ ಬಣ್ಣದ ಬಂಡಿಗಳು.ನೂರಾರು ಎತ್ತಿನ ಗಾಡಿಗಳಲ್ಲಿ ದೊಡ್ಡ ಹಂಡೆಗಳಲ್ಲಿ ಬಣ್ಣ ತುಂಬಿಕೊಂಡುಬಣ್ಣವಾಡುವುದನ್ನು ನೋಡಿ ಕಣ್ತುಂಬಿಕೊಳ್ಳುವುದೇ ಜೀವನದ ಒಂದು ಸಾರ್ಥಕ ಭಾವ.ಬಣ್ಣವಾಡಲು ಇತ್ತೀಚಿಗೆ ಎತ್ತಿನ ಬಂಡಿಗಳ ಬದಲು ಟ್ರ್ಯಾಕ್ಟರ್,ಟ್ರಕ್ಕುಗಳನ್ನು ಉಪಯೋಗಿಸುತ್ತಿದ್ದಾರೆ. ಒಂದೊಂದು ಓಣಿಯವರು ಕನಿಷ್ಟ ಐವತ್ತರಿಂದ ಅರವತ್ತು ಎತ್ತಿನ ಗಾಡಿಗಳಲ್ಲಿ ,ಒಂದೊಂದು ಗಾಡಿಗಳಲ್ಲಿ ನಾಲ್ಕಾರು ಹಂಡೆ,ಇಲ್ಲವೇ ಬ್ಯಾರಲ್ಲುಗಳನ್ನಿಟ್ಟು ಅವುಗಳ ತುಂಬ ಬಣ್ಣ ತುಂಬಿ ಕೇಕೇ ಹಾಕುತ್ತಾ ಹಾದಿ ಬೀದಿಯಲ್ಲಿ ನೆರೆದ ಜನರಮೇಲೆ ಬಣ್ಣ ಎರಚುತ್ತಾರೆ.ಒಂದೊಂದು ಓಣಿಗಳಲ್ಲಿ ಬಂಡಿಯ ಬಣ್ಣದಾಟಕ್ಕೆ ದಿನವನ್ನು ಗೊತ್ತುಮಾಡಲಾಗಿರುತ್ತದೆ.ಹಾಗಾಗಿ ಹಬ್ಬದ 5 ದಿನಗಳ ಕಾಲ ಬಾಗಲಕೋಟೆಯ ಮಾರುಕಟ್ಟೆಯು ಸ್ವಯಂಘೋಷಿತ ಬಂದ್ ಆಗುವದರಿಂದ ವ್ಯಾಪಾರಸ್ಥರು ಇದೇ ವೇಳೆಯಲ್ಲಿಯೇ ಕುಟುಂಬ ಸಮೇತರಾಗಿ ದಕ್ಷಿಣ ಇಲ್ಲವೆ ಉತ್ತರ ಭಾರತ ಪ್ರವಾಸ ಹೋಗಿಬಿಡುತ್ತಾರೆ.ನೌಕರರು ಗೋವ ಮೊದಲಾದ ಬೀಚ ಕಡೆಗೆ ಮುಖ ಮಾಡುತ್ತಾರೆ.ಹೀಗೆ ಸಂಭ್ರಮದ ಹಬ್ಬದಲ್ಲಿ ಊರುಬಿಟ್ಟು ಹೋಗುವ ಮಂದಿಗೆ ಹಾಡಿನಲ್ಲಿಯೇ ಹೀಗೆ ವಿನಂತಿಸಿಕೊಳ್ಳುತ್ತಾರೆ.ಮುತ್ತು ಮಾಣಿಕ್ಯ ಬೇಡ,ಮತ್ತೆ ಸಂಪದ ಬೇಡಹೋಳಿಹಬ್ಬದ ವೈಭವ ಬೇಡನ್ನಬೇಡ ಅಣ್ಣಯ್ಯ .ಎಂದು ಗೋಗರೆಯುತ್ತಾರೆ. ಇತ್ತೀಚಿಗೆ ಹೆಣ್ಣು ಮಕ್ಕಳೂ ಗುಂಪು ಗುಂಪಾಗಿ ಮನೆಮನೆಗಳಿಗೆ ತೆರಳಿ ಬಣ್ಣವಾಡುವ ಸಂಪ್ರದಾಯ ಬೆಳೆದು ಬಂದಿದೆ.
ಸೋಗಿನ ಬಂಡಿಗಳು :
ಬಾಗಲಕೋಟ ಹೋಳಿ ಆಚರಣೆಯ ಸಂದರ್ಭದ ಸೋಗಿನ ಬಂಡಿಗಳು ಭಾರತೀಯ ಪರಂಪರೆಯ ಸಂಸ್ಕøತಿಯ ಅನಾವರಣಕ್ಕೆ ಸಾಕ್ಷಿಯಾಗಿವೆ.ರಾಮಾಯಣ,ಮಹಾಭಾರತದ ಸಂದರ್ಭಗಳನ್ನು ಕಣ್ಣಿಗೆ ಕಟ್ಟುವಂತೆ ವೇಷ ತೊಟ್ಟು ಬಂಡಿಗಳಲ್ಲಿ ಬಂದು ಪ್ರದರ್ಶಿಸುವ ‘ಸೋಗಿನ ಬಂಡಿಗಳು’ ಬಾಗಲಕೋಟ ಹೋಳಿಗೆ ವಿಶೇಷ ಕಳೆ ಕಟ್ಟುತ್ತವೆ.ಓಕಳಿಯಾಟದಂತೆ ಒಂದೊಂದು ಓಣಿಯವರು ಸೋಗಿನ ಬಂಡಿಗಳ ಪ್ರದರ್ಶನ ಮಾಡುವುದು ಮೊದಲಿನಿಂದಲೂ ಬೆಳೆದು ಬಂದಿದೆ.ಪೌರಾಣಿಕ,ಐತಿಹಾಸಿಕ ,ಸಾಮಾಜಿಕ, ರಾಜಕೀಯ, ಹಾಗೂ ವಿಡಂಬನಾತ್ಮಕ ಸೋಗಿನ ಬಂಡಿಗಳು ಸ್ಥಬ್ಧ ಚಿತ್ರಗಳ ಹಾಗೆ ರಾರಾಜಿಸುತ್ತವೆ.ಬಣ್ಣದ ದಿನದ ರಾತ್ರಿ ಸೋಗಿನ ಬಂಡಿಯಿಂದ ಹಳೆ ಬಾಗಲಕೋಟೆ ಮಾರುಕಟ್ಟೆ ಪ್ರದೇಶ ವಿಜೃಂಬಿಸುತ್ತದೆ.ರಾತ್ರಿಯಾಗುತ್ತಿದ್ದಂತೆ ಜನರ ಕುತೂಹಲ ಕೆರಳುತ್ತದೆ.ಪೌರಾಣಿಕ ಸನ್ನಿವೇಶಗಳಾದ ರಾಮನ ಪಟ್ಟಾಭೀಷೇಕ,ದ್ರೌಪದಿಯ ವಸ್ರಾಪಹರಣ,ಸೀತೆ ಅಶೋಕವನದಲ್ಲಿರುವಾಗ ಮಾರುತಿ ಉಂಗುರ ಕೊಟ್ಟ ಸನ್ನಿವೇಶ ಮೊದಲಾವನ್ನು ಶ್ರೀಮಂತ ವೇಷಭೂಷಣ ತೊಟ್ಟು ,ಪಾತ್ರಗಳನ್ನು ಹಾಕಿ ಸಂಭ್ರಮಿಸುತ್ತಾರೆ.ಸೋಗಿನ ಬಂಡಿಗೆ ಸುಂದರವಾದ ಕಟೌಟುಗಳನ್ನು ಮಾಡಿ ಅವುಗಳಲ್ಲಿ ಪ್ರಮುಖ ಪಾತ್ರಗಳನ್ನು ವೇಷಭೂಷಣಗಳಿಂದ ಅಲಂಕರಿಸುತ್ತಾರೆ.ವೇಷಭೂಷಣಗಳನ್ನು ತಯಾರಿಸಿಕೊಡುವ ಇಲ್ಲವೇ ಬಾಡಿಗೆ ಕೊಡುವ ಕೆಲ ಪ್ರಸಿದ್ದ ಮನೆತನಗಳು ಇಲ್ಲಿವೆ.ಬಾಗಲಕೋಟೆಯ ಪ್ರಖ್ಯಾತ ಕಲಾವಿದರಾದ ನಾವಲಗಿ ಹಾಗೂ ಶಿವಪ್ಪ ಕರಿಗಾರ ಅವರು ಸುಂದರವಾದ ಕಟೌಟ ಮಾಡುವುದರಲ್ಲಿ ಸಿದ್ಧಹಸ್ತರು.ಶಿಂಗಣ್ಣ ರೊಳ್ಳಿ ಮನೆತನದವರು ವೇಷ ಹಾಕಿದವರ ಮುಖಕ್ಕೆ ಬಣ್ಣ ಹಚ್ಚುವ ಪ್ರಸಾಧನ ಕಲೆಯಲ್ಲಿ ಖ್ಯಾತಿ ಪಡೆದಿದ್ದಾರೆ.
ಕಾಮದಹನ,ಬಣ್ಣದ ಬಂಡಿ,ಸೋಗಿನ ಬಂಡಿ ಈ ಎಲ್ಲ ಆಚರಣೆಗಳೊಂದಿಗೆ ವಿವಿಧ ಬಡಾವಣೆಗಳಲ್ಲಿ ‘ಹಲಗೆ ಮೇಳ’ಗಳು ನಡೆಯುತ್ತವೆ.ಸ್ಪರ್ಧಾತ್ಮಕವಾಗಿ ನಡೆಯುವ ಮೇಳಗಳಿಗೆ ಬಹುಮಾನ ನೀಡಲಾಗುತ್ತದೆ.ವಿವಿಧ ವೇಷ ಭೂಷಣಗಳಿಂದ ಕೂಡಿ ತಾಳಕ್ಕೆ ತಕ್ಕಂತೆ ಕುಣಿತ,ಸಂಪ್ರದಾನಿ ವಾದ್ಯದೊಂದಿಗೆ ನೋಡುಗರಿಗೆ ಮುದ ನೀಡುತ್ತಾರೆ.ಮುಳುಗಡೆಯ ಬಾಗಲಕೋಟೆಯಲ್ಲಿ ಯಾವ ಹಬ್ಬದಾಚರಣೆಗಳೂ ಮುಳುಗಿ ಹೋಗದಂತೆ ಹಿಂದಿನ ವೈಭವವನ್ನು ಕಾಯ್ದುಕೊಂಡು ಬರುವಲ್ಲಿ ಇಲ್ಲಿನ ಹಿರಿಯರ ಮತ್ತು ಯುವ ಸಮುದಾಯದವರ ಪಾತ್ರ ದೊಡ್ಡದು.ನಗರದ ಬಾಗಲಕೋಟ ಹೋಳಿ ಆಚರಣಾ ಸಮಿತಿ,ಮಹಾತ್ಮ ಗಾಂಧಿ ರಸ್ತೆ ವರ್ತಕರ ಸಂಘ,ಜ್ಯೋತಿಪ್ರಕಾಶ ಸಾಳುಂಕೆ ಅಭಿಮಾನಿಗಳ ಗೆಳೆಯರ ಬಳಗ,ಕಿಲ್ಲಾಗಲ್ಲಿ,ವಿದ್ಯಾಗಿರಿ,ನವನಗರಗಳ ಗೆಳೆಯರ ಬಳಗ,ಸುಭಾಶಚಂದ್ರ ಭೋಸ ಯುವಕ ಸಂಘ ಹೀಗೆ ಪ್ರತಿಯೊಂದು ಬಡಾವಣೆಗಳಲ್ಲೂ ಗೆಳೆಯರ ಬಳಗ ಕಟ್ಟಿಕೊಂಡು ಬಾಗಲಕೋಟೆ ಹೋಳಿ ಆಚರಣೆಯ ಸಂಪ್ರದಾಯವನ್ನು ಉಳಿಸಿಕೊಂಡು ಬಂದ ಕೀರ್ತಿ ಇಲ್ಲಿ ಮುಳುಗಡೆಯೊತ್ತರ ಬಾಗಲಕೋಟೆಯ ಸಮಸ್ತ ಜನತೆಗೆ ಸಲ್ಲುತ್ತದೆ.ಒಟ್ಟಾರೆ ಬಡವ ,ಶ್ರೀಮಂತವೆನ್ನದೇ ಜಾತಿ,ಮತ,ಪಂಥಗಳನ್ನು ಮರೆತು ಮೇಲು ಕೀಳು ಎಂಬ ಮತೀಯ ಭಾವನೆಗಳನ್ನು ತೊರೆದು ಆಚರಿಸುವ ಭಾವೈಕ್ಯದ ಸಂಕೇತವಾದ ಬಾಗಲಕೋಟೆ ಹೋಳಿ ಹಬ್ಬವು ನಮ್ಮ ಸಂಸ್ಕøತಿಯ ಪ್ರತೀಕವಾಗಿದೆ.

*ವಿಳಾಸ : ಡಾ.ಪ್ರಕಾಶ ಗ.ಖಾಡೆ,ಶ್ರೀಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ ಮೊ.9845500890 *

Dr.Prakash Khade

Posted by Picasa

Kannada Sahitya Parishattu Sanmaana.

 
Posted by Picasa

Wednesday 27 March 2013


ಕವಿತೆ

- ಡಾ. ಪ್ರಕಾಶ ಗ. ಖಾಡೆ

ಬರುಬರುತ್ತ ದಿನಮಾನ ಸುಮಾರು ಎಂದರು
ಮಾಪನಕ್ಕೆ ಕುಂತಾಗ ಇಂಥದೇ ಮಾತು, ಮುರುಕು
ಯಾರಿಗೆ ಯಾರೋ ಖೂನ ಹೇಳಾವರು ಉಳಿದಿಲ್ಲ
ದಿಗಿಲಗೊಂಡವರಿಗಂತೂ ನೆಲಾ ಹೂತರೂ ತಿಳಿಯಾಕಿಲ್ಲ
.
ಎಮ್ಮಿ ಹೋತಾ ಕೋಣಾ ಕುರಿ ನಂಬಿಗಿ ಉಳಿದಿಲ್ಲ
ಕಡಿಯಾವರು ಬಡ್ಯಾವರು ಕಡೀಕ ನಿಂತಾರ
ಸುದ್ದ ಇದ್ದ ಮಂದಿ ದಂಗಾಗಿ ಒಳಗ ಕುಂತಾರ
ಹುಚ್ಚಮಲ್ಲಿ ಸಂತ್ಯಾಗ ಕೊಳ್ಳಾಕ ಏನ ಸಿಗತೈತಿ
ಹೀಂಗ ಸಂಜೀತನಾ ಬಿಡದ ಹುಡಕೀ
ಸಿಕ್ಕರ ಪಾಲ ಹಂಚಕೊಳ್ಳಾಕ ಪಾಳಿ ನಿಂತಾರ.
.
ಹೆಣಕ್ಕ ಹೆಗಲ ಕೊಡಾವ್ರು ಮಾನಗೇಡಿ ಆಗ್ಯಾರ
ಹೊತಗೊಂಡ ಆರ್ಯಾಣ ಮುಟ್ಟಿಸಿದರ ಪಾಡೈತಿ
ಅರಳಿದ ಹೂವಾ ಹಸಿ ಹುಲ್ಲಾ ಮಿನುಕು ಹುಳಾ
ನಡದವರು ತುಳದ ತುಳಿದು ಮಣ್ಣಮಾಡ್ಯಾರ
.
ಉರಿಯೋ ದೀಪ ಆರಿಸಾಕ ಗಾಳಿನ ಬೇಕಾಗಿಲ್ಲ
ಬೆಳ್ಳ ಮುಖದವರು ಬಣ್ಣಾ ಬಡಕೊಂಡ ಕರ್ರಗಾಗ್ಯಾರ
ಮ್ಯಾಲ ನೋಡಾಕ ಚೆಂದ ಒಳಗೆಲ್ಲಾ ಬಡಿವಾರ
ಮಾತಿಗೆ ಮಾತ ಬೆಳೆಸಿದರ ಬಿಸಿಲ ಜಾಸ್ತಿ; ಮೌನಾನ ಆಸ್ತಿ
.
ಕಡೀಗಿ ಒಂದ ಮಾತ ಉಳೀತು
ಪಡಕೊಂಡವರ ಋಣಕ್ಕ ಈಗೇನು ಹೇಳಲಾಗದು


7 Comments

  • ಬಸೂ says:
    ಇಷ್ಟವಾಯ್ತು
  • Gopaal Wajapeyi says:
    ಆಹಾ…
    ‘ಅವರೆಲ್ಲಾರೂ ಸಿಕ್ಕರ ಪಾಲು ಹಂಚಿಕೊಳ್ಳಾ ಪಾಳಿ ನಿಂತಾರ…’
    ‘ಮಾತಿಗೆ ಮಾತ ಬೆಳೆಸಿದರ ಬಿಸಿಲ ಜಾಸ್ತಿ ; ಮೌನಾನ ಆಸ್ತಿ…’
    ಹೌದು.
    ಈ ನಿಮ್ಮ ‘ಕಡೀಕ ಒಂದ ಮಾತು’ ಕಡಿತನಕಾ ನೆಪ್ಪಿಡೂವಂಗೈತಿ…
  • mmshaik says:
    njce..
  • ಪಡಕೊಂಡವರ ಋಣದ ಬಗ್ಗೆ ಪಡಕೊಂಡವರೇ ಹೇಳಬೇಕು… ಚೆನ್ನಾಗಿದೆ ಕವಿತೆ ಅಣ್ಣಯ್ಯ… :)
  • ಹನುಮಂತ ಹಾಲಿಗೇರಿ says:
    ಚಲೋ ಬರಿದಿರಿ, ಮಸ್ತ ಹಿಡಿಸಿತು.
  • vithal dalawai says:
    kavana channagide
  • ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ. says:
    ಕವಿತೆ ಮೆಚ್ಚಿಕೊಂಡ ತಮಗೆಲ್ಲ ಧನ್ಯವಾದಗಳು.

ಬೇಂದ್ರೆ ಕಾವ್ಯ : ತೊಳೆಯದ, ಬಾಚದ ಶಬ್ದಗಳ ಕಾವ್ಯಶಿಲ್ಪ
ಇಂದು ದ.ರಾ.ಬೇಂದ್ರೆ ಅವರ ಜನ್ಮದಿನ. ಅದರ ಅಂಗವಾಗಿ ಈ ಲೇಖನ

ಡಾ.ಪ್ರಕಾಶ ಗ.ಖಾಡೆ
ಬೇಂದ್ರೆಯವರ ಕವಿತೆಗಳ ಮೋಹಕತೆಗೆ ಇರುವುದು ಪ್ರಾಸ ಪದಗಳ ಬಳಕೆಯಲ್ಲಿ. ಇದು ಜನಪದ ಭಾಷೆಯನ್ನು ಅವರು ಉಪಯೋಗಿಸಿಕೊಂಡುದರ ಪರಿಣಾಮವಾಗಿದೆ. ಒಂದು ಭಾಷೆಯ ಶಬ್ದಸಂಪತ್ತು, ನುಡಿಗಟ್ಟು ಹೆಚ್ಚಾಗಿದ್ದಷ್ಟು ಇಂಥ ಸಾಧ್ಯತೆಗಳೂ ಹೆಚ್ಚು. ಇಲ್ಲಿ ಭಾಷೆಯನ್ನು ಇಡಿಯಾಗಿ, ಅದರ ಎಲ್ಲ ಪ್ರಭೇದಗಳೂ ಸೇರಿದಂತೆ, ತೆಗೆದುಕೊಂಡ ಕವಿಗೆ ಇರುವಷ್ಟು ಶ್ರೀಮಂತಿಕೆ, ತನ್ನನ್ನು ಯಾವುದೋ ಒಂದು ಸೀಮೆಗೆ ಸೀಮಿತಗೊಳಿಸಿಕೊಂಡ ಕವಿಗೆ ಇಲ್ಲ. ಎಂದರೆ ಮಡಿವಂತಿಕೆಯನ್ನು ಬಿಟ್ಟುಕೊಟ್ಟ ಲೇಖಕನ ವ್ಯಾಪ್ತಿ ಸಹಜವಾಗಿ ಹೆಚ್ಚು. ಇದಕ್ಕೆ ಇನ್ನೊಂದು ರೀತಿಯಲ್ಲಿ ಆಂಡಯ್ಯನ ‘ಕಬ್ಬಿಗರ ಕಾವಂ’ ಒಂದು ಉದಾಹರಣೆ. ಶುದ್ಧ ಕನ್ನಡದಲ್ಲೇ ಬರೆಯುತ್ತೇನೆಂದು ಹೊರಟ ಆಂಡಯ್ಯನ ಭಾಷೆ ಅದರ ಕಸುವನ್ನು ಕಳೆದುಕೊಂಡಿತು. ಬೇಂದ್ರೆ ತಮ್ಮ ಕಾವ್ಯಕ್ಕೆ ಜನಪದವನ್ನು ಉಪಯೋಗಿಸಿಕೊಂಡರು ಎನ್ನುವುದಕ್ಕಿಂತಲೂ ಅವರು ಭಾಷೆಯ ಉಪಯೋಗಗಳಲ್ಲಿ ಎಲ್ಲ ಮಡಿವಂತಿಕೆಯನ್ನು ದಿಕ್ಕರಿಸಿದರು ಎನ್ನುವುದೇ ಹೆಚ್ಚು ಸೂಕ್ತವೆಂದು ತೋರುತ್ತದೆ ಎನ್ನುತ್ತಾರೆ ಕೆ.ವಿ.ತಿರುಮಲೇಶ್. ಶಿಷ್ಟಪದಗಳ ಜತೆ ಜತೆಯಲ್ಲೆ ಗ್ರಾಮ್ಯಪದಗಳೂ, ಮಾರ್ಗಶೈಲಿಯ ಜತೆಗೇ ದೇಸೀಯೂ ಅವರ ಕವಿತೆಗಳಲ್ಲಿ ಕಂಡು ಬರುತ್ತವೆ. ಒಂದು ಸ್ತರದಿಂದ ಇನ್ನೊಂದು ಸ್ತರಕ್ಕೆ ದಾಟುವುದು ಮಾತ್ರವಲ್ಲ, ಒಮ್ಮೆಲೆ ಎರಡೂ ಸ್ತರಗಳಲ್ಲಿ ಸಾಗುವುದು ಕೂಡ ಬೇಂದ್ರೆಯವರಿಗೆ ಸಾಧ್ಯವಾಯಿತು.
ರೇಖೆ: ಎಂ ಎಸ್ ಮೂರ್ತಿ
ಹರಗೋಣ ಬಾ ಹೊಲ ಹೊಸದಾಗಿ
ಬಿದ್ದದ ಹ್ಯಾಗೋ ಕಾಲ್ ಕಸವಾಗಿ
ನಂಬಿಗೀಲೆ ದುಡಿತಾನ ಬಸವಣ್ಣಾ
ನಂಬಿಗ್ಯಾಗೈತಿ ಅವನ ಕಸುವಣ್ಣಾ
ಕಸುವೀಲೆ ಬೆಳೆಸೋಣ ಎತ್ತಗೋಳು
ಎತ್ತಲ್ಲ ಅವು ನಮ್ಮ ಮುತ್ತಗೋಳು
ಇಲ್ಲಿನ ಪ್ರಾಸದ ರೀತಿ ಸಹಜವಾಗುವುದು. ಬೇಂದ್ರೆಯವರ ಕಾವ್ಯದ ಮಾಂತ್ರಿಕತೆ ಇರುವುದೇ ಪ್ರಾಸದಲ್ಲಿ ತೋರುವ ವಿಶಿಷ್ಟ ರಚನಾಶಕ್ತಿಯಲ್ಲಿ. ಅವರ ಕಾವ್ಯ ಬಿಚ್ಚಿಕೊಳ್ಳುತ್ತ ಹೋಗುವ ಹೊಸ ಹೊಸ ಪದಗಳ, ವಾಕ್ಯಗಳ ರಚನಾ ಕೌಶಲವೇ ಒಂದು ಆಕರ್ಷಣೀಯವಾದುದು.ತಿರುಮಲೇಶರು ಹೇಳುವ ಹಾಗೆ ಬೇಂದ್ರೆಯವರಿಗೆ ಪದಗಳೆಂದರೆ ಬಾಗಿಲ ಹಾಗೆ, ಒಂದೊಂದು ಪದವನ್ನು ತೆಗೆಯುವಾಗಲೂ ಅವರು ಒಂದೊಂದು ಬಾಗಿಲನ್ನು ತಟ್ಟುವಂತೆ ತೋರುತ್ತದೆ. ಆದ್ದರಿಂದಲೆ ಬೇಂದ್ರೆಯವರ ಕವಿತೆಗಳನ್ನೋದುವುದೆಂದರೆ ಒಂದು ಬೆಳೆಕಿನ ಲೋಕವನ್ನು ಹೊಕ್ಕಂತೆ. ಬೇಂದ್ರೆ ಮಾತುಗಾರರು, ಮಾತಿಗೆ ಮಾತು ಜೋಡಿಸುವುದೆಂದರೆ ಅವರಿಗೆ ಪ್ರಿಯವಾದ ಸಂಗತಿ, ಆದರೆ ‘ಶಬ್ದ ಶ್ರುತಿಯಾದಾಗ ಮಾತು ಕೃತಿಯಾದೀತು’ ಎಂದು ಹೇಳಿದವರೂ ಅವರೇ, ಕೃತಿಯಲ್ಲಿ ತೋರಿಸಿ ಕೊಟ್ಟವರೂ ಅವರೆ. ಪ್ರಾಸಕ್ಕೆ ಪ್ರಾಸ ಸೇರಿಸುತ್ತ ಅವರು ಶಬ್ದಗಳ ಬೆನ್ನು ಹತ್ತುತ್ತಾರೆ. ಜನಪದರ ನುಡಿಗಟ್ಟು, ಮಾತಿನ ಶಕ್ತಿ ಇದನ್ನು ಬೇಂದ್ರೆಯವರಲ್ಲಿ ರೂಪಿಸಿದೆ.
ಗಳ ಗಳ ಗಾಳಿಯು ಜಳ ಜಳ ನೀರಾಗ
ಸುಳಿ ಸುಳಿದು ಬಂದು ನೀರಾಟ – ಆಡುತಲೆ
ಒಲಿದೊಲಿದ ನೀರು ತೆರಿತೆರಿ
ತ್ರಿಪದಿಯಲ್ಲಿ ದಟ್ಟವಾಗಿ ಸುಳಿದುಕೊಳ್ಳುವ ಪ್ರಾಸ ಪದಗಳು ಉಂಟು ಮಾಡುವ ಅರ್ಥವಂತಿಕೆಯೇ ಬೇಂದ್ರೆ ಅವರ ಕಾವ್ಯದ ಜೀವಾಳ. ಶಬ್ದವನ್ನು ಅದರ ವಿಶಿಷ್ಟ ನಾದದ ಮೂಲಕ ಕುಣಿಸುವ ಬೇಂದ್ರೆಯವರ ಕಾವ್ಯಶಿಲ್ಪ ಕನ್ನಡ ಜನಪದವನ್ನು ಮೂತರ್ಿಕರಿಸಿದೆ.
ಓ ಆಷಾಢಾ ಆಷಾಢಾ
ಆಡಿಸ್ಯಾಡ ಬ್ಯಾಡಾ
………………
ಹುಲಗಲದಾಗ ಗಿಲೀಗಿಲೀ ಅಂತಾವ |
ಗಿಲಗಂಚೀಕಾಯಿ
ಹೊಟ್ಟಿಯೊಳಗ ಹೂರಣಿಲ್ಲಾ | ಬಿಡತಾವೋ ಬಾಯಿ
ಹುಲಗಲ, ಗಿಲೀ ಗಿಲೀ, ಗಿಲಗಂಚಿ, ಆಷಾಢ, ಆಡಿಸಬ್ಯಾಡ ಈ ಪದಗಳೆಲ್ಲ ಬೇಂದ್ರೆಯವರ ಜಾನಪದ ಮಾಂತ್ರಿತೆಯಿಂದ ರೂಪಿತವಾದವು. ಹಳ್ಳಿಗರ ನಿತ್ಯದ ಬದುಕಿನಲ್ಲಿ ನಡೆಯುವ ಸಂದರ್ಭಗಳನ್ನು ಇವು ಕಟ್ಟಿಕೊಡುತ್ತವೆ. ಮಳೆಬಾರದೆ ರೈತರ ಕುಟುಂಬಗಳು ಅನುಭವಿಸುವ ಯಾತನೆಯನ್ನು ‘ಗಿಲಗಂಚೀಕಾಯಿಯ’ ಅನುಪಯುಕ್ತ ಸಪ್ಪಳ ಹಸಿದ ಹೊಟ್ಟೆಯನ್ನು ಅಣಕಿಸುವಂತಿದೆ.
ಆದಿ ಪ್ರಾಸ, ಅಂತ್ಯ ಪ್ರಾಸವೆನ್ನದೇ ಬೇಂದ್ರೆಯವರು ಪದಪದಕ್ಕೂ ಸಾಲು ಸಾಲಿಗೂ ರೂಪಿಸಿದ ಪ್ರಾಸದ ಸೃಷ್ಟಿ ಜನಪದರ ಹಾಡುಗಳಿಂದ ಪಡೆದ ಕಾಣ್ಕೆಯಾಗಿದೆ. ‘ಜನುಮದ ಜಾತ್ರಿ’ ಕವಿತೆಯ ತ್ರಿಪದಿಗಳು ತುಂಬಿಕೊಂಡು ಬಂದ ಪ್ರಾಸ ಪದಗಳು ಗ್ರಾಮೀಣರ ಪದಸಂಪತ್ತಿನ ಆಗಾಧತೆಗೆ ಸಾಕ್ಷಿಯಾಗಿವೆ.
ನೇತ್ರ ಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
ಪಾತ್ರ ಕುಣಿಸ್ಯಾನ ಒಲುಮೀಗೆ ದಿನ – ದಿನ
ಜಾತ್ರೆಯೆನಿಸಿತ್ತು ಜನುಮವು
ಹುಬ್ಬು ಹಾರಿಸಿದಾಗ ಹಬ್ಬ ಎನಿಸಿತು ನನಗ
‘ಅಬ್ಬ’ ಎನಬೇಡ ನನ ಗೆಣತಿ – ಸಾವಿರಕ
ಒಬ್ಬ ನೋಡವ್ವ ನನನಲ್ಲ
ನಲ್ಲ ನಲ್ಲೆಯರ ಜೀವನ ದಿನ ದಿನವೂ ಜಾತ್ರೆಯ ಸಡಗರ, ಸಂಭ್ರಮಗಳಿಂದ ಕೂಡಿರಲಿ ಎಂಬುದು ಕವನದ ಆಶಯ. ‘ಸಾವಿರಕ ಒಬ್ಬ ನೋಡವ್ವ ನನನಲ್ಲ’ ಎಂದು ನಲ್ಲೆ ತನ್ನ ಗೆಳತಿಗೆ ಹೇಳುವಲ್ಲಿ ಅವರ ಜೀವನದ ಸಾಮೀಪ್ಯ ಅಡಗಿದೆ. ತ್ರಿಪದಿ ರೂಪದ ಈ ಕವಿತೆ ಗ್ರಾಮೀಣದ ನಿರ್ಮಲ ಪ್ರೇಮ ಬದುಕನ್ನು ಚಿತ್ರಿಸುತ್ತದೆ. ಬೇಂದ್ರೆಯವರ ‘ನಗೀ ನವಿಲು’ ಅತ್ಯಂತ ಜನಪ್ರಿಯವಾದ ಕವಿತೆ. ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ 1929ರಲ್ಲಿ ಬರೆದ ಈ ಕವಿತೆ ‘ಗರಿ’(1932)ಯಲ್ಲಿ ಪ್ರಕಟವಾಗಿದೆ. ಕಲಘಟಗಿ ಅತ್ಯಂತ ಬೆಳೆಯುಳ್ಳ ಪ್ರದೇಶ. ಅಲ್ಲಿ ಒಮ್ಮೆ ಬರಗಾಲ ಬಿದ್ದಾಗ, ಜನರ ತೊಳಲಾಟ ಕಂಡು, ಅನ್ನ ಸಿಗದೆ ದುಃಖ ಅನುಭವಿಸುತ್ತ ಇರುವ ಸಂದರ್ಭದಲ್ಲಿ ಹಿಂದಿನ ವೈಭವದ ನೆನಪನ್ನು ಕವಿ ಹೆಣ್ಣೊಬ್ಬಳ ಮೊಗದಲ್ಲಿ ಕಾಣುವ ಕುಶಲತೆ ಜಾನಪದೀಯವಾದುದು.
ನಾರೀ ನಿನ್ನ ಮಾರಿ ಮ್ಯಾಗ
ನಗೀ ನವಿಲು ಆಡತ್ತಿತ್ತು
ಆಡತ್ತಿತ್ತು ಓಡತ್ತಿತ್ತು
ಮುಗಿಲ ಕಡೆಗೆ ನೋಡುತ್ತಿತ್ತು.
ಕಣ್ಣಿನ್ಯಾಗ ಬಣ್ಣದ ನೋಟ
ತಕ ತಕ ಕುಣಿದಾಡತಿತ್ತ
ಕುಣೀತಿತ್ತ ಮಣೀತಿತ್ತ
ಒನಪಿಲೆ ಒನದಾಡತಿತ್ತ
ಕಣ್ಣೀರಿನ ಮಳೆಯ ಕೂಡ
ತನ್ನ ದುಃಖ ತೋಡತಿತ್ತ
ದೊರಕದಕ್ಕ ಬಾಡತಿತ್ತ
ನೋವು, ವಿರಹದ ಸಂದರ್ಭವನ್ನು ಅಬಿವ್ಯಕ್ತಪಡಿಸುವಲ್ಲಿ ಕವಿ ಬಳಸಿಕೊಳ್ಳುವ ಭಾವನೆಗಳು ಹೃದಯ ಪೂರ್ವಕವಾದವುಗಳು. ಅಂತೆಯೇ ಜನಪದ ಮಾತು, ನಡೆನುಡಿ ಹೃದಯ ಪೂರ್ಣವಾದುದು. ಬೇಂದ್ರೆ ಅವರು ಹಳ್ಳಿಗರು ಆಡುವ ಮಾತು, ಆಡಿದ ಮಾತು ತುಂಬಾ ಸಹಜವಾಗಿ, ಸರಳವಾಗಿ ತಮ್ಮದಾಗಿಸಿ ಕೊಳ್ಳುತ್ತಾರೆ. ಗ್ರಾಮ್ಯ ಭಾಷೆಯನ್ನು ಕಾವ್ಯಲಿಪಿಗೆ ತರುವಾಗ ಬೇಂದ್ರೆಯವರು ತೋರುವ ಸಹಜತೆ, ಸರಳತೆ ಕನ್ನಡಕಾವ್ಯ ಸಂದರ್ಭದಲ್ಲಿಯೇ ವಿಸ್ಮಯವಾದುದು. ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಇಂಥದೊಂದು ಪ್ರಯೋಗ ಆರಂಬಿಸಿ ಕಾವ್ಯದ ನಿಜವಾದ ಶಕ್ತಿ ಸೌಂದರ್ಯವನ್ನು ಜಾನಪದದ ಮೂಲಕ ಪ್ರಕಟಪಡಿಸಿದ ಹಿರಿಮೆ ಬೇಂದ್ರೆಯವರದು.
ಬೇಂದ್ರೆಯವರ ಮನೆಮಾತು ಕನ್ನಡವಾಗಿರಲಿಲ್ಲ. ಮರಾಠಿಮಯವಾಗಿದ್ದ ಪರಿಸರ, ಮರಾಠಿ ಮನೆಮಾತಾಗಿದ್ದ ನೆಲೆಯಲ್ಲಿ ಬೇಂದ್ರೆಯವರು ಜನರಾಡುವ ಮಾತನ್ನು ಕಾವ್ಯಕ್ಕೆ ತಂದದ್ದು ಒಂದು ಅಚ್ಚರಿ. ‘ಕನ್ನಡ ಮನೆ ಮಾತಾಗಿರದ ಕನ್ನಡ ಲೇಖಕರು ಹೆಚ್ಚಾಗಿ ಶಿಷ್ಟಭಾಷೆಯನ್ನೆ ಮಾಧ್ಯಮವನ್ನಾಗಿ ಉಪಯೋಗಿಸಿರುವುದು ಕಂಡುಬರುತ್ತದೆ. ಪಂಜೆ, ಕಾಮತ್, ಗೋವಿಂದ ಪೈ, ಮುಂತಾದವರ ಮಟ್ಟಿಗೆ ಬಹುಶಃ ಇದು ಆಯ್ಕೆಯ ಪ್ರಶ್ನೆಯಾಗಿರಲಾರದು; ಏಕೆಂದರೆ ದಕ್ಷಿಣ ಕನ್ನಡದಲ್ಲಿ ಸಾರ್ವತ್ರಿಕವಾಗಿ ಆಡುವ ಭಾಷೆಗೂ ಶಿಷ್ಟ ಭಾಷೆಗೂ ಹೆಚ್ಚಿನ ವ್ಯತ್ಯಾಸವಿರುವಂತೆ ಕಂಡು ಬರುವುದಿಲ್ಲ. ಆದರೆ ಬೇಂದ್ರೆಯವರ ಸಂದರ್ಭದಲ್ಲಿ ಜನಪದ ಭಾಷೆ ಅವರದೇ ಆಯ್ಕೆಯಾಗಿದೆ ಎಂದು ಕೆ.ವಿ.ತಿರುಮಲೇಶ್ ಹೇಳುವಲ್ಲಿ ಧಾರವಾಡ ಕೇಂದ್ರದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಕನ್ನಡ ನುಡಿಯ ಸಾಧನೆ, ಸಾಧ್ಯತೆಗಳನ್ನು ಸ್ಪಷ್ಟಪಡಿಸುತ್ತದೆ. ಏಕೆಂದರೆ ಬೇಂದ್ರೆ ಅವರು ಬರೆವ ಕಾಲಕ್ಕೆ ಜನಪದ ಗೀತೆಗಳು, ಶರೀಫ್ರ ರಚನೆಗಳು ಒಂದು ಬಗೆಯಲ್ಲಿ ದಟ್ಟ ಪ್ರಭಾವವನ್ನು ಉಂಟು ಮಾಡಿದ್ದವು. ಅನ್ಯಭಾಷೆಯ ಶರೀಫ್ರು ಕನ್ನಡ ಗ್ರಾಮ್ಯದಲ್ಲಿಯೇ ಕಾವ್ಯ ಕಟ್ಟಿದ್ದೂ ಬೇಂದ್ರೆಯವರ ಪ್ರೇರಣೆಗೆ ಕಾರಣವಿದ್ದಿತು.
ಆಡುಮಾತನ್ನು ಕಾವ್ಯಕ್ಕೆ ತಂದ ಬೇಂದ್ರೆಯವರ ಸಾಧನೆ ಮತ್ತು ಸಿದ್ಧಿ ಗಮನಾರ್ಹವಾದುದು. ಭಾಷೆಯ ಸತ್ವವಿರುವುದೇ ಆಡುಮಾತಿನಲ್ಲಿ, ಆಡುಮಾತು ಒಂದು ಪಾತಳಿಗೆ ಸಿಗುವುದಿಲ್ಲ; ಅದರ ಪ್ರವಾಹವನ್ನೂ ಯಾರೊಬ್ಬರೂ ತಡೆಯಲಾರರು. ಯಾರು ಹಿಡಿದಿಡಲಾರದ ಜೀವವಿರುವುದೂ ಆಡುಮಾತಿನಲ್ಲೇ ಮಾತಾಡಬಲ್ಲವರ ಸ್ವಾತಂತ್ರ್ಯವನ್ನು ಯಾರೂ ಕದಿಯಲಾರರು’ ಎನ್ನುತ್ತಾನೆ ಗುಡಮನ್. ಭಾಷೆ ಗ್ರಾಂಥಿಕವಾದಾಗ ಅದು ಅಂತಃಸತ್ವವನ್ನು ಕಳೆದುಕೊಳ್ಳುತ್ತದೆ. ಇಂಥ ತತ್ವಹೀನ ಭಾಷೆಯಲ್ಲಿ ಕಾವ್ಯವನ್ನು ರಚಿಸಲಾಗುವುದಿಲ್ಲ. ಆದ್ದರಿಂದಲೆ ಬೇಂದ್ರೆ ಆಡುನುಡಿಯನ್ನು ಹಾಗೂ ಜನಪದ ಶೈಲಿಯನ್ನು ಕಾವ್ಯಕ್ಕೆ ಬಗ್ಗಿಸಲು ಮಾಡಿದ ನಿಧರ್ಾರ ಒಟ್ಟು ಕನ್ನಡ ಸಾಹಿತ್ಯದ ದೃಷ್ಟಿಯಿಂದ ಮಹತ್ವವುಳ್ಳದ್ದು. ಬೇಂದ್ರೆಯವರ ಮಟ್ಟಿಗೆ ಹೇಳುವುದಾದರೆ ಇದರಿಂದ ಅವರು ಶಿಷ್ಟ ಭಾಷೆಯ ಮಡಿವಂತಿಕೆಯ ಬಂಧನದಿಂದ ಹೊರಬರುವುದು ಸಾಧ್ಯವಾಯಿತು. ಇನ್ನು ಹೊಸಗನ್ನಡ ಕಾವ್ಯದ ಮಟ್ಟಿಗೆ ನೋಡಿದರೆ, ಕಾವ್ಯದ ಭಾಷೆ ಮತ್ತು ಜನಪದದ ಮಧ್ಯೆ ತಲೆಹಾಕಿದ್ದ ದೊಡ್ಡ ಕಂದರವನ್ನು ಬಹುಮಟ್ಟಿಗೆ ಕಿರಿದಾಗಿಸಲು ಬೇಂದ್ರೆಯವರ ಪ್ರಯೋಗಗಳು ಕಾರಣವಾದವು. ಕೆ.ವಿ.ತಿರುಮಲೇಶರು ಇದನ್ನು ಇನ್ನಷ್ಟು ಸ್ಪಷ್ಟಪಡಿಸುತ್ತ ಜೆಕ್ ಲೇಖಕ ಶಾಲ್ದನ್ನು ನೆರೂದ ನಲ್ಲಿ ಕಂಡ ‘ತೊಳೆಯದ, ಬಾಚದ ಶಬ್ದಗಳನ್ನು ಬೀದಿಯಿಂದ ಹೆಕ್ಕಿ ಅದನ್ನು ಅನಂತತೆಯ ಸಂದೇಶ ವಾಹಕಗಳಾಗಿ ಮಾಡುವ ಎದೆಗಾರಿಕೆ ಬೇಂದ್ರೆಯವರಲ್ಲೂ ಕಾಣುತ್ತೇವೆ. ಆಡುಮಾತಿನ ಆಯ್ಕೆ ಮಾತ್ರ ಕಾವ್ಯವಾಗುವುದಿಲ್ಲ. ಅದರ ಬಳಕೆಯಲ್ಲಿ ತೋರುವ ಸೃಜನಶೀಲತೆ ಕವಿಯ ಪ್ರತಿಭೆಯನ್ನು ಅವಲಂಬಿಸಿದೆ. ದೈನಂದಿನ ಬಳಕೆಗೆ ಸಿಕ್ಕಿ ಸವೆದು ಹೋದ ಆಡುಮಾತು ಕಾವ್ಯರೂಪು ಪಡೆಯುವಲ್ಲಿ ಕವಿಯ ಸಿದ್ದಿ ಅಡಗಿದೆ. ಬೇಂದ್ರೆಯವರಾದರೂ ಜನಪದವನ್ನು ಹಾಗೆಯೆ ತೆಗೆದುಕೊಳ್ಳಲಿಲ್ಲ. ಅದೇ ರೀತಿ ತೊಳೆಯದ, ಬಾಚದ ಶಬ್ದಗಳಿಂದಷ್ಟೇ ಅವರು ತೃಪ್ತರಾಗಲೂ ಇಲ್ಲ. ತರ್ಕದ ಹಾಗೂ ಅರ್ಥದ ಆಚೆಗಿದನ್ನು ನೋಡುವುದಕ್ಕೆ ಅವರು ಮರೆಯಲಿಲ್ಲ. ಆದ್ದರಿಂದಲೇ, ಸಮರ್ಥವಾದ ಶೈಲಿ ಕೇವಲ ಭಾಷೆಯಷ್ಟೇ ಸಂಬಂದಿಸಿರದೆ, ಒಂದು ಸಮಗ್ರ ದೃಷ್ಟಿಕೋನಕ್ಕೆ ಸಂಬಂದಿಸಿರುತ್ತದೆ. ಬೇಂದ್ರೆಯವರಿಗೆ ದ್ಯಾವಾ-ಪೃಥವಿ ಎರಡೂ ಒಮ್ಮೆಲೆ ಬೇಕಾಯಿತು. ಜನಪದದ ಮೂಲಕ ಅವರು ಮಣ್ಣಿನ ಸಂಪರ್ಕ ಇಟ್ಟುಕೊಂಡಿದ್ದೇ ಆಕಾಶದ ಕಡೆಗೂ ಕೈ ಚಾಚಿದರು. ಜನಪದವನ್ನು ಮುಖ್ಯ ಮಾಧ್ಯಮವನ್ನಾಗಿ ಬೇಂದ್ರೆಯವರು ಆರಿಸಿಕೊಂಡರೂ ಅದರಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದರು.
ಒಟ್ಟಾರೆ ಬೇಂದ್ರೆಯವರು ಬಳಸಿದ ಲಯ, ಭಾಷೆ, ಭಾವ ಬಹಳಷ್ಟು ಭಾರಿ ವಸ್ತು ಸಹ ಜಾನಪದದಿಂದ ಪಡೆದುದಾಗಿದೆ. ಗೊಂದಲಿಗರ ಹಾಡು, ದುರುಗಿ ಮುರಗವ್ವ, ಹರಕೆ ಹಾಡು, ಲಾವಣಿಕಾರರ ಪ್ರಾಸಿನ ಲಾಗು, ಗರತಿಯರ ಉಪಮೆ ಅವರ ಕವಿತೆಗಳಲ್ಲಿ ಧಾರಾಳವಾಗಿವೆ. ಅವರ ಕವಿತೆಗಳಲ್ಲಿ ವ್ಯಕ್ತವಾದ ಗಾಢವಾದ ಜಾನಪದ ಪ್ರಜ್ಞೆ ಅವರನ್ನು ಕನ್ನಡ ನವೋದಯದ ಕಾವ್ಯದ ‘ಜಾನಪದ ಗಾರುಡಿಗ’ ಎಂದೇ ಗುರುತಿಸಲಾಯಿತು.

- ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

ದೇಸಿ ಸಾಹಿತ್ಯವೇ ಶಿಷ್ಟ ಸಾಹಿತ್ಯ ರಚನೆಯ ಉದಯಕ್ಕೆ ಕಾರಣವಾಗಿದ್ದು ಸರ್ವವಿದಿತವಾಗಿದೆ. ಕನ್ನಡ ದೇಸೀ ಸಾಹಿತ್ಯವೂ ಶಿಷ್ಟ ಸಾಹಿತ್ಯಕ್ಕೆ ಸಮೃದ್ಧತೆಯನ್ನು ತರುವುದರ ಮೂಲಕ ಪ್ರಧಾನ ಅಬಿವ್ಯಕ್ತಿಯನ್ನು ಸಾಧ್ಯ ಮಾಡಿದೆ. ಕನ್ನಡ ದೇಸಿಗೆ ಪರಂಪರೆ ಇದೆ. ಕನ್ನಡ ಸಾಹಿತ್ಯ, ಭಾಷೆ ರೂಪುಗೊಂಡ ಸಂದರ್ಭದಿಂದ ದೇಸಿಯತೆಯ ಬೇರುಗಳನ್ನು ಗುರುತಿಸಬಹುದು. ‘ಗಾಥಾಸಪ್ತಶತಿ’ಯಲ್ಲಿ ‘ಪೊಟ್ಟ, ತೀರ, ತುಪ್ಪ, ಪಳ್ತಿ’ ಮೊದಲಾದ ಹಲವು ಅಚ್ಚಕನ್ನಡ ಪದಗಳು ಕಾಣಿಸಿಕೊಳ್ಳುವುದರಿಂದ ಅಲ್ಲಿ ಹಲವಾರು ದೇಸಿ ಹಾಡುಗಳು, ಕಬ್ಬಗಳು ಉಂಟಾಗಿರಬಹುದೆಂದು ಪಂಡಿತ ಮುಳಿಯ ತಿಮ್ಮಪ್ಪಯ್ಯನವರು ಗುರುತಿಸುತ್ತಾರೆ. ದೇಸಿಗಬ್ಬಿಗರ ನಾಡವರ ಸಂಸ್ಕೃತಿ ಎಂಥದೆಂದು ಕವಿರಾಜಮಾರ್ಗಕಾರನು ಮನಮುಟ್ಟುವಂತೆ ವಿವರಿಸಿದ್ದಾನೆ.
ಆ ನಾಡವರ್ಗಳ್ ಪದನರಿದು ನುಡಿಯಲುಂ, ನುಡಿದುದಂ ಅರಿದು ಆರಯಲುಂ ಆರ್ಪರ್, ನಿಜದಿಂ ಚದುರರ್, ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್…..ಕುರಿತವರಲ್ಲದೆ ಮತ್ತಂ ಪೆರರುಂ ತಂತಮ್ಮ ನುಡಿಯೊಳ್ ಎಲ್ಲರುಂ ಜಾಣರ್ …..ಜಾಣಕ್ರ್ಕಳಲ್ಲದವರುಂ ಪೂಣಿಗರ್ : ಅರಿಯದೆಯಂ ಅವಗುಣದಾ ತಾಣಮದು ಇನಿಸು ಎಡೆವೆತ್ತೊಡೆ ಮಾಣದೆ ಅದನೆ ಪಿಡಿದು ಅರಿವವೋಲ್ ಕೃತಿಗಳಂ ಕೆಡೆ ನುಡಿವರ್.
ಇದರಿಂದ ಕನ್ನಡ ದೇಸೀಯತೆಯನ್ನು ಅಂದಿನ ಸಂದರ್ಭದಿಂದ ಅರಿಯಲು ಸಾಧ್ಯ. ಆಗ ಸಂಸ್ಕೃತ ಪ್ರಾಕೃತಗಳು ಮಾತ್ರವೇ ಪ್ರಮುಖ ಸಾಹಿತ್ಯ ಭಾಷೆಗಳು. ಅವುಗಳೊಳಗೆ ಲಕ್ಷ್ಯ ಲಕ್ಷಣಗಳೆಂಬ ಎರಡೂ ಬಗೆಯ ಗ್ರಂಥಗಳು ದೊರೆಯುತ್ತಿದ್ದುದರಿಂದ ‘ಬಗೆದಂತೆ ಸಮರಿ ಪೇಳಲ್’ ಎಂದರೆ ಬೇರೆ ಯಾರ ಸಹಾಯಕ್ಕೂ ಎರವಾಗದೇ ಆ ಗ್ರಂಥಗಳಿಂದಲೇ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಂಡು, ಹೊಸ ಪ್ರಬಂಧಗಳನ್ನು ನಿರ್ಮಿಸಬಹುದಾಗಿತ್ತು. ಕನ್ನಡದ ಪರಿಸ್ಥಿತಿ ಹಾಗಿದ್ದಿಲ್ಲ. ಕನ್ನಡಕ್ಕೆ ನಾಡವರೇ ಓವಜರಾಗಿದ್ದರು. ‘ತಿರಿಕೊರಿಗೊಂಡು’ (ಇತರ ಲಕ್ಷಣ ಗ್ರಂಥಗಳನ್ನೋದಿ ಅವಗಾಹಿಸಿಕೊಂಡು) ಕನ್ನಡ ಕವಿ ಲೇಖಕರಿಗೆ ಬೋದಿಸಲು ಅವರಿಗೆ ಅಸಾಧ್ಯವಾಗಿತ್ತು. ‘ಕನ್ನಡಕ್ಕೆ ನಾಡವರೊವಜರ್’ ಎಂಬುದು, ಮೇಲಿಂದ ಮೇಲೆ ನಾಡವರನ್ನು ಹೊಗಳಿದಂತೆ ಭಾಸವಾಗುತ್ತಿದೆ. ಆದರಿದು ಕನ್ನಡ ಸಾಹಿತ್ಯದೊಳಗಿದ್ದ ನ್ಯೂನತೆಯನ್ನೇ ಗ್ರಂಥಕಾರನು ಯಾರಿಗೂ ನೋವಾಗದಂತೆ ಬಣ್ಣಿಸಿದ ಬಗೆ ಎಂಬುದನ್ನು ಮರೆಯಲಾಗದು. ‘ಕನ್ನಡಕ್ಕೊವಜರಾದ ನಾಡವರು, ಪರಮಾಚಾರ್ಯರವೋಲ್ ಸೈತಿರಲರಿಯರ್’ ಎಂಬುದರಿಂದ ಆ ಭಾವನೆ ಸಿದ್ಧವಾಗುತ್ತಿದೆ ಎಂಬಲ್ಲಿ ಮುಳಿಯ ತಿಮ್ಮಪ್ಪಯ್ಯನವರು ‘ಕವಿರಾಜಮಾರ್ಗ’ ಕಾಲದ ದೇಸೀಯತೆಯನ್ನು ಬಣ್ಣಿಸುತ್ತಾರೆ.
ಪುರಾತನ ಕನ್ನಡದ ಅಥವಾ ಉತ್ತರೋತ್ತರ ಕನ್ನಡ ನಾಡಿನ ವ್ಯಾಪ್ತಿ, ಜನ ಮನವನ್ನು ಸೂಚಿಸುವ ಈ ಕೃತಿ ಆ ಹಿಂದಿನ ಕಾಲದೊಳಗೆ ಕನ್ನಡ ಮಾರ್ಗ ಸಾಹಿತ್ಯದ ವೇಳೆ ಮೂಡಿರಬಹುದು. ಆದರೂ ಲಕ್ಷಣ ಗ್ರಂಥವು ಇರಲಿಲ್ಲವೆಂದು ಕವಿರಾಜಮಾರ್ಗಕಾರನು ಸ್ಪಷ್ಟವಾಗಿ ಸೂಚಿಸಿದ್ದಾರೆ. ಮಾತ್ರವಲ್ಲ ಅದರಿಂದಲೇ ಆ ಹಿಂದಿನ ಭಾಷೆ ‘ನುಡಿಗೆಲ್ಲಂ ಸಲ್ಲದ ಕನ್ನಡ’ವಾಗಿತ್ತೆಂದೂ ಹೇಳುತ್ತಾನೆ. ನುಡಿಗೆಲ್ಲವಿರಬೇಕಾದರೆ ಅಖಂಡ ಕನ್ನಡ ನಾಡಿನ ನುಡಿ, ಸಾಹಿತ್ಯದಲ್ಲಾದರೂ ಏಕರೂಪಗೊಳ್ಳಬೇಕು ವಾಸುಗಿಯುಮರಿಯಲಾರದೆ ಬೇಸರುಗುಂ ದೇಶೀ ಬೇರಿವೇರಪ್ಪುದರಿಂ ಇದರಿಂದ ಕವಿರಾಜಮಾರ್ಗದ ಪೂರ್ವಕಾಲಗಳಲ್ಲಿ ಕನ್ನಡದ ಬಹುರೂಪತೆ ವ್ಯಕ್ತವಾಗುತ್ತಿದೆ. ಈ ದೃಷ್ಟಾಂತ ಪದ್ಯದ ಪೂರ್ವ ಭಾಗದಲ್ಲಿ ಗ್ರಂಥಕಾರನೇ ‘ಕನ್ನಡದೊಳ್’ ಎನ್ನದೆ ‘ಕನ್ನಡಂಗಳೊಳ್’ ಎಂದು ಬಹುವಚನವನ್ನೇ ಪ್ರಯೋಗಿಸಿದುದನ್ನು ಕಾಣುತ್ತೇವೆ. ಹೀಗಾಗಿ ಉತ್ತರೋತ್ತರ ಕನ್ನಡ ನಾಡಿನಲ್ಲಿ ದೇಸಿಯಾಗಿದ್ದ ನುಡಿಯೆಂದರೆ ಕನ್ನಡವೇ ಎಂಬುದನ್ನು ಮುಳಿಯ ತಿಮ್ಮಪ್ಪಯ್ಯನವರು ಹೇಳುವ ಮೂಲಕ ಕನ್ನಡ ದೇಸಿಯತೆಯು ಮಾರ್ಗದ ಹೆಚ್ಚುಗಾರಿಕೆಗೆ ಪೂರಕವಾದುದನ್ನು ಸಾಂದಬರ್ಿಕರಿಸುತ್ತಾರೆ. ಕವಿರಾಜಮಾರ್ಗಕಾರನು ಆ ಹಿಂದಿನ ದೇಸಿ ಕಾವ್ಯಗಳನ್ನು ಎರಡಾಗಿ ವಿಗಂಡಿಸುತ್ತಾನೆ. ಆಗಿನ ಭಾಷೆಯೆಂದರೆ ‘ನುಡಿಗೆಲ್ಲಂ ಸಲ್ಲದ ಕನ್ನಡ’ವು ಅಥವಾ ಮಾರ್ಗ ಸಾಹಿತ್ಯದ ಬಳಕೆಯಿಂದಾಗಿ ನುರಿತು ನಾಲಗೆಗೈಗಳ ಹದಕ್ಕಿಳಿಯದ ಶೈಲಿಯದು. ಅದರಲ್ಲಾದರೂ ‘ಚತ್ತಾಣಮುಂ, ಬೆದಂಡೆಯುಂ ಎಂದು ಈಗಡಿನ ನೆಗರ್ತೆಯ ಕಬ್ಬದೊಳ್, ಪುರಾತನ ಕವಿಗಳ್ ಒಡಂಬಡಂ ಮಾಡಿದರ್’ ಎನ್ನುತ್ತಾನೆ. ಇದರಿಂದ ಈ ‘ಚತ್ತಾಣ, ಬೆದಂಡೆ’ ಎಂಬವುಗಳು ಈ ಕವಿರಾಜಮಾರ್ಗಕಾರನ ಕಾಲದಲ್ಲಿ ಈ ದೇಸೀಗಬ್ಬಗಳಿಗೆ ಪ್ರಸಿದ್ಧಿ ಪಡೆದ ಹೆಸರುಗಳೆಂದು ಗೊತ್ತಾಗುತ್ತಿದೆ. ಚತ್ತಾಣ ಬೆದಂಡೆ ಪ್ರಕಾರಗಳು ಕನ್ನಡ ದೇಸೀಯ ಮೂಲವಾಗಿರುವುದು ಒಪ್ಪಿತವಾಗಿದೆ. ಕ್ರಿ.ಶ. 1145 ರ ಕಾವ್ಯಾವಲೋಕನದಿಂದ ಈ ದೇಸೀ ಸ್ವರೂಪವು ಇನ್ನಷ್ಟು ವಿಸ್ತೃತವಾಗಿರು ವುದನ್ನು ಮುಳಿಯ ತಿಮ್ಮಪ್ಪಯ್ಯನವರು ದೇಸೀ ಕಾವ್ಯದ ವಂಶ ಶಾಖಾ ಚಿತ್ರವನ್ನು ಹೀಗೆ ನೀಡುತ್ತಾರೆ,
ದೇಸೀಗಬ್ಬ
1. ಪದಂ …… ಕಂದಮುಂ ಪೆರತೊಂದರಿಕೆಯ ವೃತ್ತ
ಜಾತಿಯಂ ಸಂದಿಸಿರಬೇಕು
2. ಮೆಲ್ವಾಡು …… ಆ ಪದಂಗಳ್ ಪನ್ನೆರಡುವರಂ ಸಂದಿಸಿರಬೇಕು
3. ಪಾಡು …… ಪ್ರಬಂಧದ ಮೆಯ್ಯೊಳ್ ಪದಿನಯ್ದುಂ ಇಪ್ಪತ್ತಯ್ದುಂ
ಪದಂ ಯಥಾ ಸಂಭವಂ ಪ್ರದಿದಿದ್ದರ್ು
ಸದಲಂಕಾರಾ ರಸಾಸ್ಪದಾ ಆಗಿರತಕ್ಕದ್ದು
4. ಪಾಡುಗಬ್ಬಂ …… ಹಿಂದೆದ ‘ಪಾಡು’ಗಳ ಕೂಟದಿಂದ
ರೂಪಿತವಾದುದಿದು.
5. ಮೇಲ್ವಾಡುಂ
ಬೆದಂಡೆಗಬ್ಬಮುಂ… ಅದುರಿಂ | ಆ ಪಾಡು ಗಬ್ಬದಿಂ
ಮೆಲ್ವಾಡು ಬೆದಂಡೆ ಗಬ್ಬಗಳು
ಕವಲೊಡೆದುವು.
ಈ ಬಗೆಯ ಕಬ್ಬಗಳನ್ನಲ್ಲದೆ ನಾಗವರ್ಮನು ಇನ್ನೂ ಒಂದು ಬಗೆಯ ‘ಬಾಜನೆಗಬ್ಬ’ ಎಂಬುದನ್ನೂ ವಿಸ್ತರಿಸಿದ್ದಾನೆ. ಅದು ಅಂದಿನ ದೇಸೀ ದೃಶ್ಯಕಾವ್ಯವೆಂದೂ, ಈ ವರೆಗೆ ವಿಸ್ತರಿಸಿದುದು ದೇಸೀ ಶ್ರಾವ್ಯ ಕಾವ್ಯವೆಂದೂ ಮುಳಿಯ ತಿಮ್ಮಪ್ಪಯ್ಯನವರು ಕರೆದಿದ್ದಾರೆ.
ಜನಪದ ಮತ್ತು ಶಿಷ್ಟ ಎರಡು ಸೇರಬೇಕೆಂಬುದು ಪಂಪನ ಆಶಯವಾಗಿತ್ತು. ಮಹಾಕವಿ ಪಂಪ ತನ್ನ ಮಾಗರ್ಿಯ ಮಹಾಕಾವ್ಯಗಳಲ್ಲಿ ‘ದೇಸೀಯೊಳ್ ಪುಗುವುದು’ ಎಂದುದರಿಂದ ದೇಸೀಯ ಮಹತ್ವ ಸಾರಿದ್ದಾನೆ. ಮಾರ್ಗ ಕಾವ್ಯ ಪದ್ಧತಿ ಲಕ್ಷಣ ಗ್ರಂಥದ ಅತಿಬಂಧನದಿಂದ ವಿರಸವಾಗುವಂತೆ, ಅದರ ಗಂಧ ಗಾಳಿಗೂ ಎಡೆಗೊಡದಿದ್ದಲ್ಲಿ ದೇಸೀ ಮಾಸಿ ಹೋಗುವುದು.
ನಾಡಿನ ಸಾರ್ವಜನಿಕವಾದ ಸಂಸ್ಕೃತಿಯ ಸಾರವೆಂದರೆ ದೇಸೀ. ಅದನ್ನು ಯಾವ ಬಗೆಯಲ್ಲೂ ವಿಕೃತಗೊಳಿಸಬಾರದು. ಮಾರ್ಗ ಸಾಹಿತ್ಯವಾಗಲಿ, ಲಕ್ಷಣ ಪದ್ಧತಿಯಾಗಲಿ, ತಮ್ಮ ಹೊರೆಯನ್ನು ಅದರ ಮೇಲೆ ಬಾಗಿಸಿದಲ್ಲಿ ಹೊರಿಸಿದಲ್ಲಿ ಅದರ ತನ್ನತನ ಮಾಯವಾಗುವುದು. ನಾಗರಿಕರೆಂಬುವರಿದಿರಿನಲ್ಲಿ ಹೇಗೆ ಹಳ್ಳಿಗರು ಅಂಜಿ, ನಾಚಿ, ಮುಗ್ಗರಿಸಿದ ಮನಸ್ಸಿನಿಂದ ವತರ್ಿಸುತ್ತಾರೋ ಹಾಗೆ ಮಾರ್ಗ ಸಾಹಿತ್ಯದಿದಿರಿನಲ್ಲಿ ದೇಸೀ ತಳಮಳಿಸುತ್ತಿದೆ ಎನ್ನುವ ಮುಳಿಯ ಅವರು ಅಂಥ ಹಳ್ಳಿಗರಲ್ಲಿ ಆದರ್ಶ ಜೀವನದ ಸಾರಸತ್ಪವೇ ಇಲ್ಲ ಎಂಬ ತಾತ್ಪರ್ಯ ಅಲ್ಲ, ಅದನ್ನು ಕಾಪಾಡಿ ನಿಜವಾದ ದೇಸೀಯ ಉದ್ಧಾರಕ್ಕೆ ನೆರವಾಗುವುದು ಉತ್ತಮ ನಾಗರಿಕನ ಕರ್ತವ್ಯ ಎನ್ನುತ್ತಾರೆ. ಅದರಂತೆ ದೇಸೀಯನ್ನು ಬಳಸಿಕೊಳ್ಳುವುದು ಅಥವಾ ‘ದೇಸೀಯೊಳ್ ಪುಗುವುದು’ ಮಹಾಕವಿಗಳ ಧರ್ಮವೆಂಬುದನ್ನು ಪಂಪನು ಸಾರಿಹೇಳಿದ್ದು ಈ ಕಾರಣಕ್ಕಾಗಿಯೇ ಎಂಬುದಾಗಿದೆ.
ಶಿಷ್ಟ ಕಾವ್ಯದ ಉತ್ಕೃಷ್ಟ ಕೃತಿಗಳನ್ನು ಕನ್ನಡಕ್ಕೆಕೊಬ್ಬ ಮಹಾಕವಿ ಪಂಪ ಆ ಮೂಲಕ ದೇಸೀಯ ಮಹತ್ವ ಎತ್ತಿ ಹಿಡಿದಿರುವುದು ಆ ಕಾಲದ ದೇಸೀ ಸಾಂದರ್ಬಿಕತೆಯನ್ನು ಸ್ಪಷ್ಟಪಡಿಸುತ್ತದೆ. ಪಂಪನ ‘ವಿಕ್ರಮಾರ್ಜುನ ವಿಜಯ’ದಲ್ಲಿ ಬರುವ ಕೆಲವು ಪದ್ಯಗಳು ದೇಸೀಕಾವ್ಯದ ಶ್ರೇಷವಿ ಉದಾಹರಣೆಗಳಾಗಿವೆ.
ಲವಣಾಬ್ಧಿಯೆ ಬಳ-ಸಿದುದೆನಿಸುವಗವಿ |
ಬಳಸೆಸೆದಿರೆ ಕೋಂಟೆ-ಯ ಚೆಲ್ವು ಪೊಗವಿ ||
ಲರಿದೆನಿಸಿರೆ ನೆಗೆ-ದುದು ನಭವನೆಯ್ದೆ |
ಮಿಳಿರ್ವ ಪತಾಕೆ-ಏಳಿ ದಿವಮನೆಯ್ದೆ ||
ಬಳಸಿದ ಕೆಂಬೊ-ನ್ನಮದಿಲ್ಗಳೊಳಗೆ |
ಮಣಿಮಯ ಭವನಾ-ಏಳಿ ತೊಳಸಿ ಬೆಳಗೆ ||
ರಸರಸದ ಬಾವಿ-ಮನೆ ಮನೆಗೆ ಬೇÙರಿ
ಕಿಸುಗಲ್ಗಳ ರಜದ-ಕಣಿವೆರಸು ತೋÙರಿ ||
ಸುರಕುಜ ನೆವಿಲೊ-ಳಂಗಣದೊಳೇನು |
ಮಲಪಿಲ್ಲದೆ ಕ-ಟ್ಟಿದರೆ ಕಾಮಧೇನು ||
ಇಲ್ಲಿ ಪಂಪ ಪುಲಿಗೆರೆಯ ತಿರುಳಗನ್ನಡದ ದೇಸೀಯ ಸೊಬಗನ್ನು ಕಾಣಿಸುವ ಮೂಲಕ ‘ದೇಸೀಯೊಳ್ ಪುಗುವುದು’ ಎಂಬುದನ್ನು ಸಾದಿಸುವ ಮೂಲಕ ದೇಸೀಗಿರುವ ಆಕರ್ಷಕತೆಯನ್ನು ಸ್ಪಷ್ಟಪಡಿಸಿದ್ದಾನೆ. ಕನ್ನಡ ಕಾವ್ಯದ ಮೇಲೆ ಸಂಸ್ಕೃತದ ದಟ್ಟ ಪ್ರಭಾವವಿದ್ದ ಕಾಲದಲ್ಲಿ ಕನ್ನಡ-ಸಂಸ್ಕೃತ ಬೆರಕೆಯನ್ನು ಖಂಡಿಸುವ ಮೂಲಕ ಕನ್ನಡ ದೇಸೀಯತೆಯ ಶ್ರೇಷ್ಠತೆಯನ್ನು ಸಾರಲಾಯಿತು. ನಯಸೇನ ತನ್ನ ‘ಧಮರ್ಾಮೃತ’ದ ಕೊನೆಯಲ್ಲಿ ಬೆರೆಕೆಯನ್ನು ಕಟುವಾಗಿಯೇ ಟೀಕಿಸುತ್ತಾನೆ.
ಸಕ್ಕದಮಂ ಪೇರ್ವೊಡೆ ಸಲೆ |
ಸಕ್ಕದಮಂ ಪೇರ್ಗಿ ಸುದ್ದಗನ್ನಡದೊಳ್ ತಂ ||
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ ||
ಇಲ್ಲಿ ಕವಿ ನಯಸೇನ ಅಚ್ಚ ದೇಸಿಗೆ ಮಾನ್ಯತೆ ನೀಡುವುದರೊಂದಿಗೆ ಆ ಕಾಲದ ಸಂಸ್ಕೃತಾತಿಕ್ರಮಣವನ್ನು ಖಂಡಿಸಿದ್ದಾನೆ. ಸಂಸ್ಕೃತದಲ್ಲಿ ಹೇಳಬೇಕಾದಲ್ಲಿ ಸಂಸ್ಕೃತದಲ್ಲಿಯೇ ಹೇಳಿ, ಶುದ್ಧ ಕನ್ನಡದಲ್ಲಿ ಸಂಸ್ಕೃತ ಬೆರೆಸಿ ಹೇಳುವುದು ತುಪ್ಪದಲ್ಲಿ ಎಣ್ಣೆಯನ್ನು ಬೆರೆಸಿ ಹೇಳಿದಂತೆ ಎಂದು ಹೇಳಿ ಕನ್ನಡದ ಆ ಮೂಲಕ ದೇಸಿಯತೆಯ ಹಿರಿಮೆ ಸಾರಿದ್ದಾನೆ. ‘ಭರತೇಶ ವೈಭವ’ದಲ್ಲಿ ರತ್ನಾಕರವರ್ಣಿಯು ದೇಸಿಯ ಬಳಕೆ ಕುರಿತು ಹೀಗೆ ಹೇಳುತ್ತಾನೆ:
ಸಕಲ ಲಕ್ಷಣವು ವ-ಸ್ತುಕಕೆ ವರ್ಣಕಕಿಷ್ಟು |
ವಿಕಲವಾದರು ದೋಷವಿಲ್ಲ ||
ಸಕಲ ಲಕ್ಷಣಕಾಗಿ – ಬಿರುಸು ಮಾಡಿದರೆ ಪು -
ಸ್ತಕದ ಬದನೆಕಾಯಂತಹುದು ||
‘ಆಡುವುದೊಂದು ಮಾಡುವುದಿನ್ನೊಂದು’ ಎಂಬಂತೆ ವರ್ಣಕವಾದ ದೇಸೀಯು ‘ಪುಸ್ತಕ ಬದನೆಕಾಯಿ’ ಯಾಗಲಾರದೆಂಬುದನ್ನು ಸ್ಪಷ್ಟಪಡಿಸುತ್ತಾನೆ. ಹೀಗೆ ಕನ್ನಡದ ಆರಂಭ ಕಾಲದಿಂದಲೂ ದೇಸಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತ ಬಂದು ಜನಪದ ಗೀತೆ, ಲಾವಣಿ, ಭಜನೆ, ತತ್ವಪದ, ವಚನಕಾರರ ರಚನೆಯಲ್ಲಿ, ದಾಸರ ಕೀರ್ತನೆಯಲ್ಲಿ ತನ್ನ ವ್ಯಾಪಕ ಬಾಹುಗಳನ್ನು ಚಾಚಿಕೊಳ್ಳುತ್ತ ಆಧುನಿಕ ಕಾಲಕ್ಕೆ ಬಂದ ವಸಾಹತು ಪ್ರಜ್ಞೆಯಲ್ಲೂ ತನ್ನದೇ ಅಸ್ತಿತ್ವವನ್ನು ಗುರುತಿಸಿಕೊಂಡು ಉಳಿದು ಬಂದಿರುವುದು ‘ಕನ್ನಡತನದ’ ಆ ಮೂಲಕ ‘ಕನ್ನಡ ಜನಪದ’ದ ಹೆಗ್ಗಳಿಕೆಯಾಗಿದೆ.
ಬಾದಾಮಿ ಶಾಸನದಲ್ಲಿ (ಕ್ರಿ.ಶ. 750) ಕಾಣಿಸಿಕೊಂಡ ತ್ರಿಪದಿಗಳು ಕನ್ನಡ ದೇಸೀಯ ಮೊದಲ ಹೆಗ್ಗುರುತುಗಳಾಗಿವೆ. ‘ಸಾಧುಗೆ ಸಾಧು…. ಮಾಧ್ಯುರಂಗೆ ಮಾಧುರ್ಯ…..’ ಎನ್ನುವಲ್ಲಿ ಭಾಷೆ ಶಿಷ್ಟವಾದರೂ ವಿಚಾರ ಮಾತ್ರ ಜನಪದವೇ ಆಗಿದೆ. ಕನ್ನಡದ ಅನೇಕ ಶಾಸನಗಳ ಸಾಹಿತ್ಯ ರಾಜರ ಆಡಳಿತ, ಶೌರ್ಯ, ಸಾಹಸ, ದಾನದತ್ತಿಗಳನ್ನು ಪ್ರಕಟಿಸಿದರೂ ಇಲ್ಲಿ ನಾವು ಜನಪದ ಭಾಷೆ, ಭಾವ, ಛಂದಸ್ಸು, ಅಲಂಕಾರ ಕಾಣುತ್ತೇವೆ. ಬಾದಾಮಿ ಶಾಸನದ ತ್ರಿಪದಿಯಿಂದ ಗರತಿಯರ ಹಾಡಿನ ತ್ರಿಪದಿಯವರೆಗೆ ಕನ್ನಡ ದೇಸಿ ಜನಪದದ ತ್ರಿವಿಕ್ರಮ ಸಾಧನೆ ನಮ್ಮ ಕಣ್ಣೆದುರಿಗೇ ಇದೆ. ಅದು ನಮ್ಮ ಕಾವ್ಯದಲ್ಲಿ ಬೇರೆ ಬೇರೆ ನೆಲೆಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಾ ಗುರುತಿಸಿಕೊಂಡು ಬಂದಿರುವುದು ಅದರ ಹಿರಿಮೆಯನ್ನೇ ಸಾರುತ್ತದೆ. ಪಂಪನ ಮಾರ್ಗದಲ್ಲಿ ಬಂದ ಪೊನ್ನ, ರನ್ನ, ಜನ್ನ, ನಾಗಚಂದ್ರದ ಕಾವ್ಯಗಳಲ್ಲಿ ಬಂದಿರುವ ದೇಸೀಯ ಜೊತೆಗೆ ಅಲ್ಲಿ ವ್ಯಕ್ತವಾಗಿರುವ ಜನಜೀವನದ ಚಿತ್ರಣ ಜಾನಪದವೇ ಆಗಿದೆ. ಶಿವಕೋಟಾಚಾರ್ಯರನ ‘ವಡ್ಡಾರಾಧನೆ’ ದುರ್ಗಸಿಂಹನ ‘ಪಂಚತಂತ್ರ’ ಜನಪದ ಕೃತಿಗಳೇ ಎನ್ನುವಷ್ಟು ಬಳಕೆಗೊಂಡಿವೆ. ಈ ಮೂಲಕ ಮುಂಚಿನಿಂದಲೂ ಪ್ರವಹಿಸಿಕೊಂಡು ಬಂದ ದೇಸಿಯ ಸಂಭ್ರಮ ಸಿದ್ದಿಗಳು ವಚನಕಾರರು, ದಾಸರು ಜನಪದರ ಮೂಲಕ ಮುನ್ನಡೆಸುತ್ತಾ ಬಂದು ಕನ್ನಡ ನವೋದಯ ಕಾವ್ಯ ಹುಟ್ಟಿಗೆ ಕಾರಣವಾದದ್ದು ಆಧುನಿಕೋತ್ತರ ಕನ್ನಡ ಕಾವ್ಯಚರಿತೆಯ ಮಹತ್ವ ಸಾಧನೆಯಾಗಿದೆ.