Friday 25 March 2016

ಅನುಭಾವ ಸಾಹಿತ್ಯ ಪ್ರತಿಷ್ಠಾನ

“ಸರ್ಕಾರವು ಬೀದರದಲ್ಲಿ ಅನುಭಾವ ಸಾಹಿತ್ಯ ಪ್ರತಿಷ್ಠಾನ ಸ್ಥಾಪಿಸಲಿ”-ಡಾ. ಪ್ರಕಾಶ ಖಾಡೆ

  
                                                                                                                                                                                                                                                                                                                                                                                                                                                                                                                                                                                                                                   
ಬೀದರ ಜಿಲ್ಲೆಯು ತತ್ವಪದ,ಸೂಫಿ,ವಚನ ಮತ್ತು ದಾಸ ಸಾಹಿತ್ಯ ಸೇರಿದಂತೆ ಅನುಭಾವ ಸಾಹಿತ್ಯದ ಸಮೃದ್ದ ನೆಲವಾಗಿದ್ದು ಹಾಗಾಗಿ ಬೀದರದಲ್ಲಿ ಕರ್ನಾಟಕ ಸರ್ಕಾರವು ಅನುಭಾವ ಸಾಹಿತ್ಯ ಪ್ರತಿಷ್ಠಾನ ಸ್ಥಾಪಿಸಿ ಅನುದಾನ ಬಿಡುಗಡೆ ಮಾಡುವ ಮೂಲಕ ಅನುಭಾವ ಸಾಹಿತ್ಯ ಪ್ರಚಾರ ಮತ್ತು ಪ್ರಸಾರ ಕಾರ್ಯ ಮಾಡಲಿ ಎಂದು ಬಾಗಲಕೋಟದ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ. ಪ್ರಕಾಶ ಖಾಡೆ ಸರ್ಕಾರಕ್ಕೆ ಒತ್ತಾಸೆ ತಿಳಿಸಿದರು.
ಅವರು ದಿನಾಂಕ- 25/03/2016 ರಂದು ಮುಂಜಾನೆ 10.30 ಗಂಟೆಗೆ  ಬೀದರಿನ ಹೋಟಲ್ ಕೃಷ್ಣಾ ರಿಜೇನ್ಸಿಯ ಸಭಾಂಗಣದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ,ಬೀದರ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಎರಡು ದಿನಗಳ ತತ್ವಪದ ಮತ್ತು ಸೂಫಿ ಸಾಹಿತ್ಯ ಪರಂಪರೆ ಕುರಿತ ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ತತ್ವಪದಕಾರರ ಹಾಗೂ ಸೂಫಿ ಸಂತರ ಕೊಡುಗೆ ಅಪಾರವಾಗಿದೆ. ಭಾಷಾ ಸೌಹಾರ್ದತೆ,ಅನ್ಯಮತ ಸಂಹಿಷ್ಣುತೆ,ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಈ ಸಾಹಿತ್ಯ ಪ್ರಮುಖ ಪಾತ್ರವಹಿಸಿದೆ.ಈ ನಿಟ್ಟನಲ್ಲಿ ಇನ್ನೂ ಹೆಚ್ಚಿನ ಕಾರ್ಯ ಮಾಡಿ ಈ ಸಾಹಿತ್ಯವನ್ನು ಬೆಳಕಿಗೆ ತರುವ ಅವಶ್ಯಕತೆ ಇದೆ ಎಂದು ತಿಳಿಸಿದರು.


   ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ಸುರೇಶ ಚನಶೆಟ್ಟಿ ಆಗಮಿಸಿ ಮಾತನಾಡುತ್ತಾ ಗಡಿ ಭಾಗವಾದ ಬೀದರದಲ್ಲಿ ಕನ್ನಡ ಪರ ಹಾಗೂ ಸಾಹಿತ್ಯಿಕವಾದ ಚಟುವಟಿಕೆಗಳು ನಿರಂತರವಾಗಿ ನಡೆಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕನ್ನಡಪರ ಸಂಘಟನೆಗಳು ಸಕ್ರೀಯವಾಗಿ ಕನ್ನಡ ಬೆಳವಣಿಗೆಗೆ ಶ್ರಮಿಸಬೇಕು ಹಾಗೂ ಇಂತಹ ಕಾರ್ಯಗಳಿಗೆ ಪರಿಷತ್ತಿನ ಸಹಕಾರ ಇರುತ್ತದೆ ಎಂದರು. 

ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾದ ಶ್ರೀ ಶಿವಕುಮಾರ ನಾಗವಾರ ಹಾಗೂ ಸಿದ್ದಾರ್ಥ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಬಿ.ಕೆ.ಮಠಪತಿ   ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಜನ ಸಾಮಾನ್ಯರ ಅನುಭಾವದ ನೆಲೆಯಿಂದ ಬಂದ ತತ್ವಪದ ಹಾಗೂ ಸೂಫಿ ಸಾಹಿತ್ಯವು ಜನರ ಬದುಕಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಹಕಾರಿಯಾಗಿವೆ, ಇವುಗಳ ಕುರಿತು ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದರು.                                                                                                                                                                                                                                                                                                                                                                                                                                                                                                                           
   ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಜಗನ್ನಾಥ ಹೆಬ್ಬಾಳೆ ವಹಿಸಿಕೊಂಡು ಮಾತನಾಡುತ್ತಾ ದಾಸರು, ಶರಣರು.ತತ್ವಪದಕಾರರು,ಸೂಫಿ-ಸಂತರು ಜನಹಿತ ಸಂದೇಶ ನೀಡಿ ಜನಪರ ಚಿಂತಕರಾದವರು. ಬದುಕಬೇಕಾದ ಜೀವನಕ್ಕೆ ರೀತಿ-ನೀತಿಗಳು,ಮಾನವೀಯ ಮೌಲ್ಯಗಳು ಭೋದಿಸಿದರು. ಈ ಸಾಹಿತ್ಯವು ಸಮಾಜದ ನೋವು  ನಲಿವುಗಳಿಗೆ  ಸ್ಪಂದಿಸುವ  ಸಾಹಿತ್ಯವಾಗಿವೆ.  ಉತ್ತಮ ಸಂಸ್ಕಾರ ನೀಡುವ ಈ ಸಾಹಿತ್ಯವನ್ನು ನಿರಂತರವಾಗಿ ಪ್ರಚಾರ ಮತ್ತು ಪ್ರಸಾರ ಮಾಡಬೇಕೆಂದು ತಿಳಿಸಿದರು. 
ಕಾರ್ಯಕ್ರಮದ ಪ್ರಾರಂಭದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯ ಗೌರವಾಧ್ಯಕ್ಷರಾದ ಶ್ರೀ ಸಂಜೀವಕುಮಾರ ಅತಿವಾಳೆ ಪ್ರಾಸ್ತಾವಿಕವಾಗಿ ಮಾತನಾಡಿ ನಿರ್ಲಕ್ಷಕೆ ಒಳಗಾದ ಸಾಹಿತ್ಯವನ್ನು ಮತ್ತು ಸಾಹಿತಿಗಳನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸ ಕರುನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯ ಮುಖಾಂತರ ಮಾಡಲಾಗುವುದು ಎಂದರು.



ಕು.ಮಹೇಶ್ವರಿ ಶಿವಶರಣಪ್ಪ ಹಾಗೂ ಕು. ರಾಧಿಕಾ ರವರು ತತ್ವಪದ ಗಾಯನ ನಡೆಸಿಕೊಟ್ಟರು. ಶ್ರೀ ರವೀಂದ್ರ ಲಂಜವಾಡಕರ್ ಸ್ವಾಗತಿಸಿದರು, ಶ್ರೀ ಅಬ್ದುಲ್ ರಹೀಮ   ನಿರೂಪಿಸಿದರು. ಶ್ರೀ ಶಾಮರಾವ ನೆಲವಾಡೆ ವಂದಿಸಿದರು. ವೇದಿಕೆಯ ಪದಾಧಿಕಾರಿಗಳು, ಸಾಹಿತಿಗಳು ಮತ್ತು ಕನ್ನಡ ಆಸಕ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.
ವಂದನೆಗಳೊಂದಿಗೆ,

Friday 10 July 2015

ಮಣ್ಣ ಹನಿಗಳು.

ಮಣ್ಣ ಹನಿಗಳು.













 ಎಲ್ಲ ಕೊಡುವ
ಮಣ್ಣಲ್ಲೂ:
ಬಗೆ ಬಗೆಯ
ಬಣ್ಣಗಳು.
 2.
ಹೊರಟು ನಿಂತಮೇಲೆ
ಉಳಿವ ನೆನಪುಗಳ ಹೂತಿಡಲು:
ಎಷ್ಟು ಅಗೆದರೂ ಮಣ್ಣು
ಅಳಿವ ಭೂರಮೆಯ ಒಡಲು.
3
ಮಣ್ಣ ಸೇರುವ
ಎಲ್ಲವೂ:
ಮಣ್ಣ ಒಡಲ
ಕಾಣ್ಕೆಗಳು.
4.
ಕಲ್ಲು
ಮೂರ್ತಿಗೂ:
ಮಣ್ಣೇ
ಒಡಲು.
 5.
ಮಣ್ಣ ಹೊಟ್ಟೆ
ಸೇರಿದ ತಿಪ್ಪೆ:
ಸಮೃದ್ಧಿಗೆ
ಸಾಕ್ಷಿಯಾಯಿತು.
6.
ಮಣ್ಣು ಕೊಡಲು
ಹೋದವರು:
ಮಣ್ಣು ಒಯ್ಯಬೇಕಿಲ್ಲ.
7.
ನಮಗಷ್ಟೇ
ಅಲ್ಲ ಪರೀಕ್ಷೆ:
ಮಣ್ಣಿನ ಗುಣಕ್ಕೂ
ಪರೀಕ್ಷೆ.
 8.
ಮಣ್ಣ
ಹಣತೆಗಳಲ್ಲೂ:
ಜಗವ ತುಂಬುವ
ಬೆಳಕು.
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ


 .


Monday 28 April 2014

ಡಾ.ಶಿವಾನಂದ ಕುಬಸದ ಅವರ "ಫೇಸ್ಬುಕ್ಕ ಪುರಾಣ'

ಫೇಸ್ ಬುಕ್ ಚರಿತೆ...!!
=================
ಡಾ.ಶಿವಾನಂದ ಕುಬಸದ










ಮೊದಲ ದಿನ ಮುತುವರ್ಜಿ
ಫೇಸ್ ಬುಕ್ ನೆಲ್ಲ ಸುತ್ತು ಹೊಡೆದು
ಹುಡುಕಿ ಹೆಕ್ಕಿ ತೆಗೆದು ಎಲ್ಲರಿಗೂ 
ಜಡಿದು ಬಿಡುತ್ತಾರೆ ಫ್ರೆಂಡ್ ರಿಕ್ವೆಸ್ಟ್..
ಅಲ್ಲಿಯ ಇಲ್ಲಿಯ ಗೊತ್ತಿರುವ ಗೊತ್ತಿರದ
ಎಂಥೆಂಥವರಿಗೋ ಹೊರಡುತ್ತವೆ ಜಗವ ಸುತ್ತಿ
ಮೈಲಾರ ಮುತ್ತಿ ಮತ್ತೆ ತಿರುಗಿ ಬಂದು ಬಿದ್ದು
ಸಂಭ್ರಮಕೆ ಕಾರಣವಾಗುವ
“accepted your friend request” ಗಳು...
ಇವನಿಗೋ ಜಗವ ಗೆದ್ದಷ್ಟು ಖುಷಿ
ಇಂಥವರೆಲ್ಲ ನನ್ನ ಫ್ರೆಂಡ್ ಆದರಲ್ಲ ಎಂದು
ಶುರುವಾಯಿತು ನೋಡಿ ಮೆಸೇಜ್ ಗಳ ಕುಟ್ಟುವುದು
ಸುಖಾಸುಮ್ಮನೆ ‘ಊಟ ಆಯ್ತಾ, ನಿದ್ದೆ ಆಯ್ತಾ’
ಎನ್ನುವ ಕಿರಿಕ್ಕು ಮತ್ತೆ ನೋಡಿದ್ದನ್ನು ಉಣ್ಣುವುದನ್ನು
ಹಾದಿ ಬೀದಿಯಲ್ಲಿ ಬಿದ್ದಿದ್ದನ್ನು ಕ್ಲಿಕ್ಕಿಸಿ ಅಪ್ ಲೋಡಿಸಿ
ಏನೇನೋ ಬರೆದು ಕವಿತೆ ಎಂದು ಹೆಸರಿತ್ತು
ಮೀಡಿಯಾದಲ್ಲಿ ಕಸ ತುಂಬುವ ಕಾರ್ಯಕ್ರಮ
ಮತ್ತೆ ದಿನಕ್ಕೆ ಇಪ್ಪತ್ತು ಬಾರಿ ಹಣಿಕೆ ಹಾಕಿ like ಲೈಕ್ ಗಳ
ಕಮೆಂಟ್ ಗಳ ಲೆಕ್ಕ ಹಾಕುವ ಪರಿಕ್ರಮ
ಕಡಿಮೆಯಾದರೆ ಅಯ್ಯೋ ಭ್ರಮನಿರಸನ
ಹುಡುಗಿಯೊಬ್ಬಳು ಲೈಕಿಸಿದರಂತೂ ಶುದ್ಧ ಮನ್ಮಥ
ಅವಳೆಲ್ಲೋ ಇವನೆಲ್ಲೋ ದಿನಕೊಂದು ವೇಷ
ಕನಸು ಹಳವಂಡಗಳ ಜಾತ್ರೆ ಇವನ ಇಡೀ ದಿನ
ಎಲ್ಲೋ ಕಳಕೊಂಡು ಬಿಟ್ಟ ತನ್ನವರನು ಎದುರಿನವರನು
ಯಾವುದೊ ಗುಂಗಿನಲಿ ಕೈಯೊಳಗೊಂದು ಸೆಲ್ಲು
ತಗ್ಗಿಸಿದ ತಲೆ ದಿಟ್ಟಿಸುವ ಕಣ್ಣು ಸ್ಕ್ರೋಲೋ ಸ್ಕ್ರೋಲು
ಇವನ ಮಾತಿಗೆ ಅವನೊಪ್ಪದಿರೆ ಸಿದ್ಧವಿದೆ Unfriend ನಾಟಕ
ಆಶ್ಚರ್ಯವೆಂದರೆ Friend ಆಗಿದ್ದಾದರೂ ಯಾವಾಗ
ಕೊನೆಗೊಮ್ಮೆ ಜ್ಞಾನೋದಯ ಜೊತೆಗೆ ವೈರಾಗ್ಯ
‘ಏನಿದೆ ಈ ಫೇಸ್ ಬುಕ್ ಲಿ, Addict ಆದೆನೆ ನಾನು’
ತೇಲಿ ಬಿಟ್ಟ Confession Letter ತನ್ನ ಸ್ಟೇಟಸ್ ಲಿ
ನಾಳೆಯಿಂದಲಿ ನಾನಿಲ್ಲ ಈ ಫೇಸ್ ಬುಕ್ ಲಿ
ಹೊರಟಿರುವೆ ಮುಕ್ತನಾಗಿ ನನ್ನ ಬದುಕಿಗೆ ಮರಳಿ
ನೀವೆಲ್ಲ ಸುಖವಾಗಿರಿ ಮತ್ತೆ ನನ್ನ ನೆನಪಿರಲಿ
ಅದೋ ಬಂದವು ಕಮೆಂಟುಗಳು ಸಲಹೆಗಳು ಗೆಳೆಯಾ
ನೀನಿಲ್ಲದೆ ನಾವಿಲ್ಲ ದಯವಿಟ್ಟು ಇದ್ದು ಬಿಡು ಹೀಗೇ ಇಲ್ಲೇ
ಅದನೆ ಬಯಸಿದನೀತ ಬಿಡುವ ಮನಸಿರಲಿಲ್ಲ
ಮತ್ತೇಕೆ ನಾಟಕವೋ ಅರ್ಥವಾಗಲಿಲ್ಲ...
ಇದ್ದೂ ಇರದ ಹಾಗೆ ಇರಬಹುದಲ್ಲವೇ ಇಲ್ಲಿ...??
ಡಾ.ಶಿವಾನಂದ ಕುಬಸದ
೨೯-೦೪-೧೪

ಸಂಗಮೇಶ ಕೋಟಿ ಅವರ ಪದ್ಯ.'ಈಗ'

s
ಶೀರ್ಷಿಕೆ ಸೇರಿಸಿ

Tuesday 28 January 2014

ಗಣರಾಜ್ಯೋತ್ಸವ ಸನ್ಮಾನ-2014

ಸತ್ಕಾರದ ಸಂಭ್ರಮ :
-------------------
ಬಾಗಲಕೋಟ ಜಿಲ್ಲಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ನನಗೆ ಇಂದು( 26.1.2014) ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಜಿಲ್ಲಾಡಳಿತ ವತಿಯಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಆಯುಕ್ತರಾದ ಶ್ರೀ ಶಿವಯೋಗಿ ಕಳಸದ ಅವರು ಪ್ರಶಸ್ತಿ ನೀಡಿ ಸತ್ಕರಿಸಿದರು.ಸಮಾರಂಭದಲ್ಲಿ ರಾಜ್ಯ ಸರಕಾರದ ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಎಸ್.ಆರ್.ಪಾಟೀಲ,ಬಾಗಲಕೋಟ ಶಾಸಕರಾದ ಶ್ರೀ ಎಚ್.ವೈ.ಮೇಟಿ,ಜಿಲ್ಲಾಧಿಕಾರಿಗಳಾದ ಶ್ರೀ ಮನೋಜ ಜೈನ್,ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶ್ರೀ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮೊದಲಾ ಗಣ್ಯರು ಉಪಸ್ಥಿತರಿದ್ದರು.-ಡಾ.ಪ್ರಕಾಶ ಗ.ಖಾಡೆ