Tuesday 28 January 2014

ಗಣರಾಜ್ಯೋತ್ಸವ ಸನ್ಮಾನ-2014

ಸತ್ಕಾರದ ಸಂಭ್ರಮ :
-------------------
ಬಾಗಲಕೋಟ ಜಿಲ್ಲಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ನನಗೆ ಇಂದು( 26.1.2014) ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಜಿಲ್ಲಾಡಳಿತ ವತಿಯಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಆಯುಕ್ತರಾದ ಶ್ರೀ ಶಿವಯೋಗಿ ಕಳಸದ ಅವರು ಪ್ರಶಸ್ತಿ ನೀಡಿ ಸತ್ಕರಿಸಿದರು.ಸಮಾರಂಭದಲ್ಲಿ ರಾಜ್ಯ ಸರಕಾರದ ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಎಸ್.ಆರ್.ಪಾಟೀಲ,ಬಾಗಲಕೋಟ ಶಾಸಕರಾದ ಶ್ರೀ ಎಚ್.ವೈ.ಮೇಟಿ,ಜಿಲ್ಲಾಧಿಕಾರಿಗಳಾದ ಶ್ರೀ ಮನೋಜ ಜೈನ್,ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶ್ರೀ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮೊದಲಾ ಗಣ್ಯರು ಉಪಸ್ಥಿತರಿದ್ದರು.-ಡಾ.ಪ್ರಕಾಶ ಗ.ಖಾಡೆ